ETV Bharat / bharat

ಕೇರಳದಲ್ಲಿ ಬಿಎಸ್​ವೈಗೆ ಪದೇ ಪದೆ ಪ್ರತಿಭಟನೆ ಬಿಸಿ.... ಪ್ರತಿಭಟನಾಕಾರರು ಪೊಲೀಸ್​ ವಶಕ್ಕೆ

author img

By

Published : Dec 24, 2019, 5:07 PM IST

Updated : Dec 24, 2019, 5:49 PM IST

ಕಣ್ಣೂರು ಬಳಿಯ ತಳಿಫರಂಭ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಎಸ್​ವೈ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಸ್​ವೈ ಕಾರು ಬರುತ್ತಿದ್ದಂತೆ 'ಗೋ ಬ್ಯಾಕ್ ಯಡಿಯೂರಪ್ಪ' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಬೆಂಗಾಹಲು ವಾಹನ ತಡೆಯಲು ಯತ್ನಿಸಿದರು. ಹೀಗಾಗಿ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಪ್ರತಿಭಟನಕಾರರು ಪೊಲೀಸ್​ ವಶಕ್ಕೆ, Kannur Police detain KSU-Youth Congress workers
ಪ್ರತಿಭಟನಕಾರರು ಪೊಲೀಸ್​ ವಶಕ್ಕೆ

ಕಣ್ಣೂರು(ಕೇರಳ): ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಬೆಂಗಾವಲು ವಾಹನವನ್ನು ತಡೆಯಲು ಯತ್ನಿಸಿದ ಕೇರಳ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರನ್ನು ಕೇರಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇರಳ ಪ್ರವಾಸದಲ್ಲಿರುವ ಸಿಎಂ ಬಿಎಸ್​ವೈ ಇಂದು ಕಣ್ಣೂರಿಗೆ ತೆರಳಿದ್ದರು. ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್​ಆರ್​ಸಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಕೆಎಸ್​ಯು(ಕೇರಳ ವಿದ್ಯಾರ್ಥಿ ಸಂಘಟನೆ) ಹಾಗೂ ಯುವ ಕಾಂಗ್ರೆಸ್​ ಕಾರ್ಯಕರ್ತರು, ಯಡಿಯೂರಪ್ಪ ಬೆಂಗಾವಲು ವಾಹನಗಳನ್ನು ತಡೆಯಲು ಯತ್ನಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದರು.

ಬಿಎಸ್​ವೈ ಪ್ರವಾಸಕ್ಕೆ ತಟ್ಟಿದ ಪ್ರತಿಭಟನೆ ಬಿಸಿ

ಕಣ್ಣೂರು ಬಳಿಯ ತಳಿಫರಂಭ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಎಸ್​ವೈ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಸ್​ವೈ ಕಾರು ಬರುತ್ತಿದ್ದಂತೆ 'ಗೋ ಬ್ಯಾಕ್ ಯಡಿಯೂರಪ್ಪ' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಬೆಂಗಾಹಲು ವಾಹನ ತಡೆಯಲು ಯತ್ನಿಸಿದರು. ಹೀಗಾಗಿ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಇಂದೇ ಬಿಎಸ್​ವೈ ಬೆಂಗಳೂರಿಗೆ:

ವಿಶೇಷ ಪೂಜೆಯ ನಿಮಿತ್ತ ಕೇರಳಕ್ಕೆ ತೆರಳಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೇರಳದಲ್ಲಿನ ಪ್ರತಿಭಟನೆಗಳ ಬಿಸಿಯಿಂದಾಗಿ ಇಂದೇ ರಾಜ್ಯಕ್ಕೆ ಮರಳುತ್ತಿದ್ದಾರೆ.

ಕಣ್ಣೂರು(ಕೇರಳ): ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಬೆಂಗಾವಲು ವಾಹನವನ್ನು ತಡೆಯಲು ಯತ್ನಿಸಿದ ಕೇರಳ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರನ್ನು ಕೇರಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇರಳ ಪ್ರವಾಸದಲ್ಲಿರುವ ಸಿಎಂ ಬಿಎಸ್​ವೈ ಇಂದು ಕಣ್ಣೂರಿಗೆ ತೆರಳಿದ್ದರು. ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್​ಆರ್​ಸಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಕೆಎಸ್​ಯು(ಕೇರಳ ವಿದ್ಯಾರ್ಥಿ ಸಂಘಟನೆ) ಹಾಗೂ ಯುವ ಕಾಂಗ್ರೆಸ್​ ಕಾರ್ಯಕರ್ತರು, ಯಡಿಯೂರಪ್ಪ ಬೆಂಗಾವಲು ವಾಹನಗಳನ್ನು ತಡೆಯಲು ಯತ್ನಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದರು.

ಬಿಎಸ್​ವೈ ಪ್ರವಾಸಕ್ಕೆ ತಟ್ಟಿದ ಪ್ರತಿಭಟನೆ ಬಿಸಿ

ಕಣ್ಣೂರು ಬಳಿಯ ತಳಿಫರಂಭ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಎಸ್​ವೈ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಸ್​ವೈ ಕಾರು ಬರುತ್ತಿದ್ದಂತೆ 'ಗೋ ಬ್ಯಾಕ್ ಯಡಿಯೂರಪ್ಪ' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಬೆಂಗಾಹಲು ವಾಹನ ತಡೆಯಲು ಯತ್ನಿಸಿದರು. ಹೀಗಾಗಿ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಇಂದೇ ಬಿಎಸ್​ವೈ ಬೆಂಗಳೂರಿಗೆ:

ವಿಶೇಷ ಪೂಜೆಯ ನಿಮಿತ್ತ ಕೇರಳಕ್ಕೆ ತೆರಳಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೇರಳದಲ್ಲಿನ ಪ್ರತಿಭಟನೆಗಳ ಬಿಸಿಯಿಂದಾಗಿ ಇಂದೇ ರಾಜ್ಯಕ್ಕೆ ಮರಳುತ್ತಿದ್ದಾರೆ.

Intro:Body:

Police detain Kerala Students Union after they tried to block the convoy of Chief Minister BS Yediyurappa 


Conclusion:
Last Updated : Dec 24, 2019, 5:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.