ETV Bharat / bharat

ಭಾರತದೊಂದಿಗಿನ ಸ್ನೇಹವನ್ನು ಬಲಗೊಳಿಸುತ್ತೇನೆ: ಇಸ್ರೇಲ್​ ಪ್ರಧಾನಿ ನೆತನ್ಯಾಹು - ಇಸ್ರೆಲ್​ ಪ್ರಧಾನಿ ನೆತನ್ಯಾಹು ಲೆಟೆಸ್ಟ್ ನ್ಯೂಸ್​

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ದೇಶವು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯಾಗಿ 28 ನೇ ವರ್ಷಾಚರಣೆ ಆಚರಿಸುತ್ತಿರುವುದರಿಂದ ಭಾರತದೊಂದಿಗೆ ತನ್ನ ಆಳವಾದ ಸ್ನೇಹವನ್ನು ಬಲಪಡಿಸುವುದಾಗಿ ಹೇಳಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
Israeli PM Netanyahu
author img

By

Published : Jan 29, 2020, 11:57 PM IST

ಜೆರುಸಲೆಮ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ದೇಶವು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯಾಗಿ 28 ನೇ ವರ್ಷಾಚರಣೆ ಆಚರಿಸುತ್ತಿರುವುದರಿಂದ ಭಾರತದೊಂದಿಗೆ ತನ್ನ ಆಳವಾದ ಸ್ನೇಹವನ್ನು ಬಲಪಡಿಸುವುದಾಗಿ ಹೇಳಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. "ಭಾರತ ಮತ್ತು ಇಸ್ರೇಲ್​​ ನಡುವೆ ಸಂಬಂಧ ಬೆಳೆದು ಇಂದಿಗೆ 28 ವರ್ಷ ಕಳೆದಿದೆ. ನಾನು ನನ್ನ ಸ್ನೇಹಿತ ನರೇಂದ್ರ ಮೋದಿಯವರ ಆತ್ಮೀಯ ಸ್ನೇಹಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಇಸ್ರೇಲ್ ಮತ್ತು ಭಾರತದ ನಡುವೆ ಆಳವಾದ ಸ್ನೇಹವು ಹೊರಹೊಮ್ಮಿದೆ. ಅದು ನಮ್ಮ ಅನೇಕ ಸಹಯೋಗಗಳಲ್ಲಿ ಸ್ಪಷ್ಟವಾಗಿದೆ. ಈ ಮಹತ್ವದ ಸ್ನೇಹವನ್ನು ನಾವು ಬಲಪಡಿಸುವುದನ್ನು ಮುಂದುವರಿಸುತ್ತೇವೆ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

1950 ರಲ್ಲಿ ಭಾರತವು ಅಧಿಕೃತವಾಗಿ ಗುರುತಿಸಿದರೂ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸದಿದ್ದಾಗ ಇಸ್ರೇಲ್ ಮುಂಬೈನಲ್ಲಿ ದೂತವಾಸವನ್ನು ತೆರೆಯಿತು. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ 1992 ರ ಜ. 29 ರಂದು ಇಸ್ರೇಲ್‌ನೊಂದಿಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಲು ನಿರ್ಧರಿಸಿತ್ತು. ಅದನ್ನು ಈಗ ಕಾರ್ಯತಂತ್ರದ ಸಹಭಾಗಿತ್ವದ ಮಟ್ಟಕ್ಕೆ ಏರಿಸಲಾಗಿದೆ ಎಂದಿದ್ದಾರೆ ನೆತನ್ಯಾಹು.

ಜೆರುಸಲೆಮ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ದೇಶವು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯಾಗಿ 28 ನೇ ವರ್ಷಾಚರಣೆ ಆಚರಿಸುತ್ತಿರುವುದರಿಂದ ಭಾರತದೊಂದಿಗೆ ತನ್ನ ಆಳವಾದ ಸ್ನೇಹವನ್ನು ಬಲಪಡಿಸುವುದಾಗಿ ಹೇಳಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. "ಭಾರತ ಮತ್ತು ಇಸ್ರೇಲ್​​ ನಡುವೆ ಸಂಬಂಧ ಬೆಳೆದು ಇಂದಿಗೆ 28 ವರ್ಷ ಕಳೆದಿದೆ. ನಾನು ನನ್ನ ಸ್ನೇಹಿತ ನರೇಂದ್ರ ಮೋದಿಯವರ ಆತ್ಮೀಯ ಸ್ನೇಹಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಇಸ್ರೇಲ್ ಮತ್ತು ಭಾರತದ ನಡುವೆ ಆಳವಾದ ಸ್ನೇಹವು ಹೊರಹೊಮ್ಮಿದೆ. ಅದು ನಮ್ಮ ಅನೇಕ ಸಹಯೋಗಗಳಲ್ಲಿ ಸ್ಪಷ್ಟವಾಗಿದೆ. ಈ ಮಹತ್ವದ ಸ್ನೇಹವನ್ನು ನಾವು ಬಲಪಡಿಸುವುದನ್ನು ಮುಂದುವರಿಸುತ್ತೇವೆ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

1950 ರಲ್ಲಿ ಭಾರತವು ಅಧಿಕೃತವಾಗಿ ಗುರುತಿಸಿದರೂ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸದಿದ್ದಾಗ ಇಸ್ರೇಲ್ ಮುಂಬೈನಲ್ಲಿ ದೂತವಾಸವನ್ನು ತೆರೆಯಿತು. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ 1992 ರ ಜ. 29 ರಂದು ಇಸ್ರೇಲ್‌ನೊಂದಿಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಲು ನಿರ್ಧರಿಸಿತ್ತು. ಅದನ್ನು ಈಗ ಕಾರ್ಯತಂತ್ರದ ಸಹಭಾಗಿತ್ವದ ಮಟ್ಟಕ್ಕೆ ಏರಿಸಲಾಗಿದೆ ಎಂದಿದ್ದಾರೆ ನೆತನ್ಯಾಹು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.