ETV Bharat / bharat

ಜೈ ಶ್ರೀರಾಮ್​, ವಂದೇ ಮಾತರಂ ಹೇಳದ ಮುಸ್ಲಿಮರು ಉಗ್ರಗಾಮಿಗಳೇ?.. ಸಂಸದ ಓವೈಸಿ ಆಕ್ರೋಶ - undefined

ಜೈಶ್ರೀರಾಮ್​ ಹಾಗೂ ವಂದೇ ಮಾತರಂ ಎಂದು ಘೋಷಣೆ ಕೂಗಲು ನಿರಾಕರಿಸಿದ ಜನರ ಮೇಲೆ ಹಲ್ಲೆ ನಡೆಯುತ್ತಿದೆ. ಮುಸ್ಲಿಂ ಹಾಗೂ ದಲಿತರನ್ನೇ ಟಾರ್ಗೆಟ್​ ಮಾಡಿ ಈ ಕೃತ್ಯ ಎಸಗುತ್ತಿದ್ದಾರೆ. ಸಂಘ ಪರಿವಾರದ ಜತೆ ನಂಟು ಹೊಂದಿರುವವರು ಹೀಗೆ ಮಾಡುತ್ತಿದ್ದಾರೆ. ಇಂತಹ ಘಟನೆಗಳು ನಡೆಯಬಾರದು ಎಂದು ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.

ಅಸಾದುದ್ದೀನ್ ಓವೈಸಿ
author img

By

Published : Jun 30, 2019, 5:57 PM IST

ಹೈದರಾಬಾದ್: ಜೈ ಶ್ರೀರಾಮ, ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗದ ಮುಸ್ಲಿಮರನ್ನು ಉಗ್ರಗಾಮಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಆಲ್ ಇಂಡಿಯಾ ಮಜ್ಲಿಸ್​ ಎ ಇತ್ತೇಹದುಲ್ ಮುಸ್ಲಿಮೀನ್​ (ಎಐಎಂಐಎಂ) ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.

ಜೈ ಶ್ರೀರಾಮ್​ ಹಾಗೂ ವಂದೇ ಮಾತರಂ ಎಂದು ಘೋಷಣೆ ಕೂಗಲು ನಿರಾಕರಿಸಿದ ಜನರ ಮೇಲೆ ಹಲ್ಲೆ ನಡೆಯುತ್ತಿದೆ. ಮುಸ್ಲಿಂ ಹಾಗೂ ದಲಿತರನ್ನೇ ಟಾರ್ಗೆಟ್​ ಮಾಡಿ ಈ ಕೃತ್ಯ ಎಸಗುತ್ತಿದ್ದಾರೆ. ಸಂಘ ಪರಿವಾರದ ಜತೆ ನಂಟು ಹೊಂದಿರುವವರು ಹೀಗೆ ಮಾಡುತ್ತಿದ್ದಾರೆ. ಇಂತಹ ಘಟನೆಗಳು ನಡೆಯಬಾರದು ಎಂದು ಹೇಳಿದ್ದಾರೆ.

ಅಸಾದುದ್ದೀನ್ ಓವೈಸಿ ಆರೋಪ

ಮುಸ್ಲಿಂ ಸಮುದಾಯದಲ್ಲಿ ಜನಿಸಿದರೆ ಜನಸಂಖ್ಯೆ ಹೆಚ್ಚಳ ಎನ್ನುತ್ತಾರೆ. ಮದರಸಾಕ್ಕೆ ತೆರಳಿದರೆ ಭಯೋತ್ಪಾದನೆ ಎನ್ನುತ್ತಾರೆ. ಒಂದು ವೇಳೆ ಸತ್ತರೆ, ಭೂಮಿಗೆ ಶಾಂತಿಯಾಯ್ತು ಎನ್ನುತ್ತಾರೆ. ದೇಶದಲ್ಲಿ ಏನಾಗುತ್ತಿದೆ. ಹೀಗೆ ಭಾರತದಿಂದ ರವಾನೆಯಾಗುತ್ತಿರುವ ಸಂದೇಶ ಇಲ್ಲಿನ ಸಂವಿಧಾನಕ್ಕೇ ವಿರುದ್ಧವಾದುದು ಎಂದಿದ್ದಾರೆ.

  • AIMIM MP Asaduddin Owaisi: People are being beaten up if they do not raise slogans of JSR (Jai Shri Ram) & VM (Vande Mataram). Such incidents aren't going to stop. Only Muslims&Dalits are being targeted. There are orgs behind such incidents&all of them are linked to Sangh pariwar pic.twitter.com/GCV26YMENW

    — ANI (@ANI) June 30, 2019 " class="align-text-top noRightClick twitterSection" data=" ">

ಮುಸ್ಲಿಮರ ಮೇಲಾಗುತ್ತಿರುವ ದಾಳಿಯನ್ನು ಧಾರ್ಮಿಕ ದೃಷ್ಠಿಯಿಂದ ನೋಡಬಾರದು ಎಂದ ಕೇಂದ್ರ ಸಚಿವ ಮುಖ್ತಾರ್​ ಅಬ್ಬಾಸ್​ ನಕ್ವಿ ಅವರನ್ನು ಇದೇ ವೇಳೆ ಓವೈಸಿ ಟೀಕಿಸಿದರು. 2017ರ ಗೋವುಗಳ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಹತ್ಯೆಯಾದ ಪೆಹ್ಲು ಖಾನ್​ ಹಾಗೂ ಆತನ ಮಕ್ಕಳ ವಿರುದ್ಧ ರಾಜಸ್ಥಾನ ಸರ್ಕಾರ ಚಾರ್ಜ್‌ಶೀಟ್​ ಸಲ್ಲಿಕೆ ಮಾಡಿದ್ದನ್ನು ಖಂಡಿಸಿದರು. ಪೆಹ್ಲು ಖಾನ್ ಮೇಲಿನ ಹಲ್ಲೆಯನ್ನ ಕಾಂಗ್ರೆಸ್​ ಖಂಡಿಸಿತ್ತು. ಆದರೆ, ಈಗ ಗೆಹ್ಲೋಟ್​ ಸರ್ಕಾರದ ನಡೆ ಖಂಡನೀಯವಾಗಿದೆ. ರಾಜಸ್ಥಾನದ ಮುಸ್ಲಿಮರು ಕಾಂಗ್ರೆಸ್​ಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೈದರಾಬಾದ್: ಜೈ ಶ್ರೀರಾಮ, ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗದ ಮುಸ್ಲಿಮರನ್ನು ಉಗ್ರಗಾಮಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಆಲ್ ಇಂಡಿಯಾ ಮಜ್ಲಿಸ್​ ಎ ಇತ್ತೇಹದುಲ್ ಮುಸ್ಲಿಮೀನ್​ (ಎಐಎಂಐಎಂ) ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.

ಜೈ ಶ್ರೀರಾಮ್​ ಹಾಗೂ ವಂದೇ ಮಾತರಂ ಎಂದು ಘೋಷಣೆ ಕೂಗಲು ನಿರಾಕರಿಸಿದ ಜನರ ಮೇಲೆ ಹಲ್ಲೆ ನಡೆಯುತ್ತಿದೆ. ಮುಸ್ಲಿಂ ಹಾಗೂ ದಲಿತರನ್ನೇ ಟಾರ್ಗೆಟ್​ ಮಾಡಿ ಈ ಕೃತ್ಯ ಎಸಗುತ್ತಿದ್ದಾರೆ. ಸಂಘ ಪರಿವಾರದ ಜತೆ ನಂಟು ಹೊಂದಿರುವವರು ಹೀಗೆ ಮಾಡುತ್ತಿದ್ದಾರೆ. ಇಂತಹ ಘಟನೆಗಳು ನಡೆಯಬಾರದು ಎಂದು ಹೇಳಿದ್ದಾರೆ.

ಅಸಾದುದ್ದೀನ್ ಓವೈಸಿ ಆರೋಪ

ಮುಸ್ಲಿಂ ಸಮುದಾಯದಲ್ಲಿ ಜನಿಸಿದರೆ ಜನಸಂಖ್ಯೆ ಹೆಚ್ಚಳ ಎನ್ನುತ್ತಾರೆ. ಮದರಸಾಕ್ಕೆ ತೆರಳಿದರೆ ಭಯೋತ್ಪಾದನೆ ಎನ್ನುತ್ತಾರೆ. ಒಂದು ವೇಳೆ ಸತ್ತರೆ, ಭೂಮಿಗೆ ಶಾಂತಿಯಾಯ್ತು ಎನ್ನುತ್ತಾರೆ. ದೇಶದಲ್ಲಿ ಏನಾಗುತ್ತಿದೆ. ಹೀಗೆ ಭಾರತದಿಂದ ರವಾನೆಯಾಗುತ್ತಿರುವ ಸಂದೇಶ ಇಲ್ಲಿನ ಸಂವಿಧಾನಕ್ಕೇ ವಿರುದ್ಧವಾದುದು ಎಂದಿದ್ದಾರೆ.

  • AIMIM MP Asaduddin Owaisi: People are being beaten up if they do not raise slogans of JSR (Jai Shri Ram) & VM (Vande Mataram). Such incidents aren't going to stop. Only Muslims&Dalits are being targeted. There are orgs behind such incidents&all of them are linked to Sangh pariwar pic.twitter.com/GCV26YMENW

    — ANI (@ANI) June 30, 2019 " class="align-text-top noRightClick twitterSection" data=" ">

ಮುಸ್ಲಿಮರ ಮೇಲಾಗುತ್ತಿರುವ ದಾಳಿಯನ್ನು ಧಾರ್ಮಿಕ ದೃಷ್ಠಿಯಿಂದ ನೋಡಬಾರದು ಎಂದ ಕೇಂದ್ರ ಸಚಿವ ಮುಖ್ತಾರ್​ ಅಬ್ಬಾಸ್​ ನಕ್ವಿ ಅವರನ್ನು ಇದೇ ವೇಳೆ ಓವೈಸಿ ಟೀಕಿಸಿದರು. 2017ರ ಗೋವುಗಳ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಹತ್ಯೆಯಾದ ಪೆಹ್ಲು ಖಾನ್​ ಹಾಗೂ ಆತನ ಮಕ್ಕಳ ವಿರುದ್ಧ ರಾಜಸ್ಥಾನ ಸರ್ಕಾರ ಚಾರ್ಜ್‌ಶೀಟ್​ ಸಲ್ಲಿಕೆ ಮಾಡಿದ್ದನ್ನು ಖಂಡಿಸಿದರು. ಪೆಹ್ಲು ಖಾನ್ ಮೇಲಿನ ಹಲ್ಲೆಯನ್ನ ಕಾಂಗ್ರೆಸ್​ ಖಂಡಿಸಿತ್ತು. ಆದರೆ, ಈಗ ಗೆಹ್ಲೋಟ್​ ಸರ್ಕಾರದ ನಡೆ ಖಂಡನೀಯವಾಗಿದೆ. ರಾಜಸ್ಥಾನದ ಮುಸ್ಲಿಮರು ಕಾಂಗ್ರೆಸ್​ಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:Body:

Owaisi 


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.