ETV Bharat / bharat

ಇಪಿಎಸ್​-ಒಪಿಎಸ್​ ಗುಂಪಿನ ಗಲಾಟೆ: ಎಐಎಡಿಎಂಕೆ ಕಚೇರಿ ಸೀಲ್

ಪನ್ನೀರ್‌ಸೆಲ್ವಂ ಅವರು ಆಡಳಿತಾರೂಢ ಡಿಎಂಕೆ ಸರ್ಕಾರದ 'ಗುಲಾಮ' ಎಂದು ಪಳನಿಸ್ವಾಮಿ ಬಹಿರಂಗವಾಗಿ ವಾಗ್ದಾಳಿ ನಡೆಸಿದರು. ಒಪಿಎಸ್ ಪಕ್ಷದ ಕಚೇರಿಯಿಂದ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಮತ್ತು ಪಕ್ಷದ ಸುಪ್ರೀಮೊ ದಿವಂಗತ ಜೆ. ಜಯಲಲಿತಾ ಅವರು ಬಳಸುತ್ತಿದ್ದ ಕಚೇರಿಯ ಕೊಠಡಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಪನ್ನೀರ್​ಸೆಲ್ವಂ ಆರೋಪಿಸಿದರು.

author img

By

Published : Jul 11, 2022, 4:38 PM IST

AIADMK headquarters sealed by TN Govt
AIADMK headquarters sealed by TN Govt

ಚೆನ್ನೈ: ಎಐಡಿಎಂಕೆ ಪಕ್ಷದಲ್ಲಿ ಪರಸ್ಪರ ಎದುರಾಳಿ ನಾಯಕರಾದ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಮತ್ತು ಒ ಪನ್ನೀರಸೆಲ್ವಂ ಅವರ ಬೆಂಬಲಿಗರ ನಡುವೆ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಅಧಿಕಾರಿಗಳು ಸೋಮವಾರ ಬೀಗ ಜಡಿದು ಬಂದ್​ ಮಾಡಿದರು. ಹಿರಿಯ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.

ಎಂಜಿಆರ್ ಮಾಳಿಗೈ (M G R Maaligai) ಹೆಸರಿನ ಎಐಎಡಿಎಂಕೆ ಕಚೇರಿಗೆ ಅಧಿಕಾರಿಗಳು ಬೀಗ ಜಡಿದ ನಂತರ ಆಕ್ರೋಶಗೊಂಡ ಓ. ಪನ್ನೀರಸೆಲ್ವಂ ಬೆಂಬಲಿಗರೊಂದಿಗೆ ಹೊರಬಂದರು. ಕಚೇರಿಗೆ ಬೀಗ ಹಾಕಿರುವುದರ ವಿರುದ್ಧ ನ್ಯಾಯಾಲಯದ ಕದ ತಟ್ಟುವುದಾಗಿ ಅವರು ಹೇಳಿದರು.

ಪನ್ನೀರಸೆಲ್ವಂ ಮತ್ತು ಪಳನಿಸ್ವಾಮಿ ಅವರಿಗೆ ನಿಷ್ಠರಾಗಿರುವ ಗುಂಪುಗಳ ಮಧ್ಯೆ ಇಂದು ಬೆಳಗ್ಗೆ ಘರ್ಷಣೆ ಉಂಟಾಗಿತ್ತು. ಚೆನ್ನೈನ ಹೊರವಲಯದಲ್ಲಿರುವ ಅವ್ವೈ ಷಣ್ಮುಗಂ ಸಲೈನಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯೊಳಗೆ ಮತ್ತು ಸುತ್ತಮುತ್ತ ಹಿಂಸಾಚಾರ ವಿಧ್ವಂಸಕ ಕೃತ್ಯಗಳು ನಡೆದವು.

ಪನ್ನೀರ್‌ಸೆಲ್ವಂ ಅವರು ಆಡಳಿತಾರೂಢ ಡಿಎಂಕೆ ಸರ್ಕಾರದ 'ಗುಲಾಮ' ಎಂದು ಪಳನಿಸ್ವಾಮಿ ಬಹಿರಂಗವಾಗಿ ವಾಗ್ದಾಳಿ ನಡೆಸಿದರು. ಓಪಿಎಸ್ ಪಕ್ಷದ ಕಚೇರಿಯಿಂದ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಮತ್ತು ಪಕ್ಷದ ಸುಪ್ರೀಮೊ ದಿವಂಗತ ಜೆ. ಜಯಲಲಿತಾ ಅವರು ಬಳಸುತ್ತಿದ್ದ ಕಚೇರಿಯ ಕೊಠಡಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಪನ್ನೀರ್​ಸೆಲ್ವಂ ಆರೋಪಿಸಿದರು.

ಎಐಎಡಿಎಂಕೆ ಮುಖಂಡ ಡಿ ಜಯಕುಮಾರ್ ಮಾತನಾಡಿ, ಪಕ್ಷದ ಕಚೇರಿಗೆ ರಕ್ಷಣೆ ನೀಡುವಂತೆ ಕೋರಿ ಪೊಲೀಸರಿಗೆ ಮೊದಲೇ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದ ಅವರು, ಹಿಂಸಾಚಾರಕ್ಕೆ ಪನ್ನೀರಸೆಲ್ವಂ ಮತ್ತು ಅವರ ಬೆಂಬಲಿಗರೇ ಕಾರಣಕರ್ತರು ಎಂದು ದೂಷಿಸಿದರು.

ಇದನ್ನು ಓದಿ:ಎ.ಪಳನಿಸ್ವಾಮಿ ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥ, ಒ.ಪನ್ನೀರಸೆಲ್ವಂ ಉಚ್ಛಾಟನೆ

ಚೆನ್ನೈ: ಎಐಡಿಎಂಕೆ ಪಕ್ಷದಲ್ಲಿ ಪರಸ್ಪರ ಎದುರಾಳಿ ನಾಯಕರಾದ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಮತ್ತು ಒ ಪನ್ನೀರಸೆಲ್ವಂ ಅವರ ಬೆಂಬಲಿಗರ ನಡುವೆ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಅಧಿಕಾರಿಗಳು ಸೋಮವಾರ ಬೀಗ ಜಡಿದು ಬಂದ್​ ಮಾಡಿದರು. ಹಿರಿಯ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.

ಎಂಜಿಆರ್ ಮಾಳಿಗೈ (M G R Maaligai) ಹೆಸರಿನ ಎಐಎಡಿಎಂಕೆ ಕಚೇರಿಗೆ ಅಧಿಕಾರಿಗಳು ಬೀಗ ಜಡಿದ ನಂತರ ಆಕ್ರೋಶಗೊಂಡ ಓ. ಪನ್ನೀರಸೆಲ್ವಂ ಬೆಂಬಲಿಗರೊಂದಿಗೆ ಹೊರಬಂದರು. ಕಚೇರಿಗೆ ಬೀಗ ಹಾಕಿರುವುದರ ವಿರುದ್ಧ ನ್ಯಾಯಾಲಯದ ಕದ ತಟ್ಟುವುದಾಗಿ ಅವರು ಹೇಳಿದರು.

ಪನ್ನೀರಸೆಲ್ವಂ ಮತ್ತು ಪಳನಿಸ್ವಾಮಿ ಅವರಿಗೆ ನಿಷ್ಠರಾಗಿರುವ ಗುಂಪುಗಳ ಮಧ್ಯೆ ಇಂದು ಬೆಳಗ್ಗೆ ಘರ್ಷಣೆ ಉಂಟಾಗಿತ್ತು. ಚೆನ್ನೈನ ಹೊರವಲಯದಲ್ಲಿರುವ ಅವ್ವೈ ಷಣ್ಮುಗಂ ಸಲೈನಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯೊಳಗೆ ಮತ್ತು ಸುತ್ತಮುತ್ತ ಹಿಂಸಾಚಾರ ವಿಧ್ವಂಸಕ ಕೃತ್ಯಗಳು ನಡೆದವು.

ಪನ್ನೀರ್‌ಸೆಲ್ವಂ ಅವರು ಆಡಳಿತಾರೂಢ ಡಿಎಂಕೆ ಸರ್ಕಾರದ 'ಗುಲಾಮ' ಎಂದು ಪಳನಿಸ್ವಾಮಿ ಬಹಿರಂಗವಾಗಿ ವಾಗ್ದಾಳಿ ನಡೆಸಿದರು. ಓಪಿಎಸ್ ಪಕ್ಷದ ಕಚೇರಿಯಿಂದ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಮತ್ತು ಪಕ್ಷದ ಸುಪ್ರೀಮೊ ದಿವಂಗತ ಜೆ. ಜಯಲಲಿತಾ ಅವರು ಬಳಸುತ್ತಿದ್ದ ಕಚೇರಿಯ ಕೊಠಡಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಪನ್ನೀರ್​ಸೆಲ್ವಂ ಆರೋಪಿಸಿದರು.

ಎಐಎಡಿಎಂಕೆ ಮುಖಂಡ ಡಿ ಜಯಕುಮಾರ್ ಮಾತನಾಡಿ, ಪಕ್ಷದ ಕಚೇರಿಗೆ ರಕ್ಷಣೆ ನೀಡುವಂತೆ ಕೋರಿ ಪೊಲೀಸರಿಗೆ ಮೊದಲೇ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದ ಅವರು, ಹಿಂಸಾಚಾರಕ್ಕೆ ಪನ್ನೀರಸೆಲ್ವಂ ಮತ್ತು ಅವರ ಬೆಂಬಲಿಗರೇ ಕಾರಣಕರ್ತರು ಎಂದು ದೂಷಿಸಿದರು.

ಇದನ್ನು ಓದಿ:ಎ.ಪಳನಿಸ್ವಾಮಿ ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥ, ಒ.ಪನ್ನೀರಸೆಲ್ವಂ ಉಚ್ಛಾಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.