ಕರ್ನಾಟಕ

karnataka

By ETV Bharat Karnataka Team

Published : Jun 4, 2024, 10:40 PM IST

ETV Bharat / state

ನರೇಂದ್ರ ಮೋದಿಯವರೇ ಪ್ರಧಾನಿ ಆಗ್ತಾರೆ: ಯದುವೀರ್‌ - Yaduveer Wadiyar

ಲೋಕಸಭೆ ಫಲಿತಾಂಶದ ಕುರಿತು ಯದುವೀರ್ ಒಡೆಯರ್ ಮಾತನಾಡಿದರು.

yaduveer-wadiyar
ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (ETV Bharat)

ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (ETV Bharat)

ಮೈಸೂರು: ರಾಜ್ಯ ಮತ್ತು ರಾಷ್ಟ್ರದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನವನ್ನು ಗೆದ್ದಿಲ್ಲ ನಿಜ. ಆದರೆ ಮೈತ್ರಿ ಪಕ್ಷಗಳೊಂದಿಗೆ ಸೇರಿ ನಾವೇ ಸರ್ಕಾರ ರಚನೆ ಮಾಡುತ್ತೇವೆ. ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ನೂತನ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿ‍ಶ್ವಾಸ ವ್ಯಕ್ತಪಡಿಸಿದರು.

ಇಂದು ಗೆಲುವಿನ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿರುವುದು ನನ್ನ ಗೆಲುವಲ್ಲ, ಮೈತ್ರಿ ಪಕ್ಷದ ಗೆಲುವು. ತಾಯಿ ಚಾಮುಂಡೇಶ್ವರಿ ಹಾಗೂ ಕಾವೇರಮ್ಮನ ಆರ್ಶೀವಾದದಿಂದ ಗೆದ್ದಿದ್ದೇನೆ. ಮೈಸೂರಿನಲ್ಲಿ ಕಾಂಗ್ರೆಸ್‌ ಹಾಗೂ ಸ್ವತಃ ಮುಖ್ಯಮಂತ್ರಿಗಳೇ ಕಠಿಣ ಸವಾಲೊಡ್ಡಿದ್ದರು. ಅದನ್ನು ಎದುರಿಸಿ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆ ಹೊಂದಾಣಿಕೆಯಿಂದ ಸರ್ಕಾರ ರಚಿಸುತ್ತೇವೆ ಎಂದು ಯದುವೀರ್‌ ಒಡೆಯರ್‌ ಹೇಳಿದರು.

ಮೈಸೂರು-ಕೊಡಗಿನ ಜನ ಜಾತಿ-ಧರ್ಮ ನೋಡದೇ ಭಾರತೀಯರು ಎಂಬ ಮನೋಭಾವದಿಂದ ಮತ ಹಾಕಿದ್ದಾರೆ. ಚುನಾವಣೆಯಲ್ಲಿ ಎಲ್ಲೂ ಜಾತಿ-ಧರ್ಮ ಬಳಸಿಲ್ಲ. ನಿರೀಕ್ಷೆಯಂತೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಸಹಾಯದಿಂದ ಗೆಲುವು ಸಾಧಿಸಿದ್ದೇವೆ ಎಂದರು.

ಎಲ್ಲರ ಸಹಕಾರದಿಂದ ಮಗ ಗೆದ್ದಿದ್ದಾನೆ-ಪ್ರಮೋದಾ ದೇವಿ ಒಡೆಯರ್‌: ಎಲ್ಲರ ಸಹಕಾರ ಮತ್ತು ಶ್ರಮದಿಂದ ನನ್ನ ಮಗ ಗೆದ್ದಿದ್ದಾನೆ. ಮುಂದೆ ಒಳ್ಳೆಯ ಕೆಲಸ ಮಾಡುತ್ತಾನೆ ಎಂಬ ನಂಬಿಕೆಯಿದೆ. ಅರಮನೆಗೆ ಅಧಿಕಾರ ಹೊಸದಲ್ಲ, ಹಿಂದೆಯೂ ನಮ್ಮ ಮನೆಯವರು ಎಂಪಿಯಾಗಿದ್ದರು. ನಂತರ ಸ್ಪಲ್ಪ ಗ್ಯಾಪ್‌ ಆಯಿತು. ಈಗ ಮತ್ತೆ ಅಧಿಕಾರ ಬಂದಿದೆ. ಆಗ ಅಧಿಕಾರದಲ್ಲಿದ್ದಾಗ ನಾನು ಅದನ್ನು ನೋಡಿಕೊಳ್ಳುತ್ತಿದ್ದೆ. ಈಗ ಮಗನಿಗೆ ಮಾರ್ಗದರ್ಶನ ನೀಡುತ್ತೇನೆ ಎಂದು ಪ್ರಮೋದe ದೇವಿ ಒಡೆಯರ್‌ ಹೇಳಿದರು.

ಇನ್ನು, ಅರಮನೆಗೂ ವ್ಯಾಜ್ಯಗಳಿಗೂ ಈಗ ಬಂದಿರುವ ಅಧಿಕಾರಕ್ಕೂ ಸಂಬಂಧವಿಲ್ಲ. ಅವುಗಳು ಅವುಗಳ ಪಾಡಿಗೆ ನಡೆಯುತ್ತವೆ. ಎಲ್ಲಾ ಸರ್ಕಾರಗಳು ಇದ್ದಾಗಲೂ ವ್ಯಾಜ್ಯಗಳು ನಡೆಯುತ್ತಿದ್ದವು ಎಂದು ತಿಳಿಸಿದರು.

ಜಿ. ಟಿ ದೇವೇಗೌಡ (ETV Bharat)

ಸಿಎಂ ರಾಜೀನಾಮೆ ನೀಡಲಿ:ಜಿ.ಟಿ.ದೇವೇಗೌಡ:ಮಂಡ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸೋಲುತ್ತಾರೆ. ಇದು ಸೂರ್ಯ-ಚಂದ್ರ ಇರುವಷ್ಟು ಸತ್ಯ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಜಿ.ಟಿ.ದೇವೇಗೌಡ, ಈಗ ಹೆಚ್.ಡಿ.ಕುಮಾರಸ್ವಾಮಿ ಬಹಳ ಅಂತರದಿಂದ ಗೆದ್ದಿದ್ದಾರೆ. ಮುಖ್ಯಮಂತ್ರಿಗಳು ಮಾತನಾಡುವಾಗ ತೂಕವಿರಲಿ. ಅವರ ಮಾತಿನಂತೆ ಈಗ ರಾಜೀನಾಮೆ ಕೊಡುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.

ಬೇರೆ ರಾಜ್ಯಗಳಲ್ಲಿ ಬಿಜೆಪಿ ಸೋತರೂ ನಮ್ಮ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಗೆದ್ದಿದೆ. ನಮ್ಮ ಮೈತ್ರಿ ಉತ್ತಮ ಎನ್ನುವ ಕಾರಣಕ್ಕಾಗಿ ಈ ಗೆಲುವು ಸಿಕ್ಕಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಎದುರಿಸಲು ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅವಶ್ಯ ಎಂದರು.

ಇದನ್ನೂ ಓದಿ:ರಾಜವಂಶಸ್ಥನಿಗೆ ಒಲಿದ ಪ್ರಜಾಪ್ರಭುತ್ವದ ಅಧಿಕಾರ: ಹೆಚ್ಚು ಅಂತರದೊಂದಿಗೆ ಯದುವೀರ್ ಒಡೆಯರ್​ಗೆ ಗೆಲುವು - Yaduveer Wadiyar

ABOUT THE AUTHOR

...view details