ಕರ್ನಾಟಕ

karnataka

By

Published : Nov 25, 2020, 5:29 PM IST

ETV Bharat / videos

ಚರಂಡಿ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಜಗಳ: ಮಹಿಳೆಯ ಬೆರಳು ಕಟ್​​

ದೊಡ್ಡಬಳ್ಳಾಪುರ: ಮನೆ ಮುಂದಿನ ಚರಂಡಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಈ ಜಗಳ ವಿಕೋಪಕ್ಕೆ ಹೋಗಿ ದೊಣ್ಣೆಯಿಂದ ಎರಡು ಕುಟುಂಬದವರು ಬಡಿದಾಡಿಕೊಂಡಿದ್ದಾರೆ. ಈ ಹೊಡೆದಾಟದಲ್ಲಿ ಸಿದ್ದಮ್ಮ ಎಂಬ ಮಹಿಳೆಯ ಬೆರಳು ತುಂಡಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಹೊಸಹಳ್ಳಿಯಲ್ಲಿ ಘಟನೆ ನಡೆದಿದೆ. ದಲಿತ ಕುಟುಂಬದವರಾದ ಸಿದ್ದಮ್ಮ ಮತ್ತು ಗಂಗಾಧರ್ ಕಟುಂಬದ ನಡುವೆ ಚರಂಡಿ ವಿಚಾರಕ್ಕೆ ಜಗಳವಾಗಿದೆ. ಗಾಯಗೊಂಡ ಮಹಿಳೆ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡಿದಾಟದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಹೊಸಹಳ್ಳಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಗಂಗಾಧರ್, ಅಂಬಿಕಾ, ಹರೀಶ್ ಕುಮಾರ್​ನನ್ನ ಬಂಧಿಸಲಾಗಿದೆ.

ABOUT THE AUTHOR

...view details