ಕೊರೊನಾ ಕರಿ ನೆರಳು: ಬೆಳಗಾವಿ ಗಡಿ ಭಾಗದ ಪಪ್ಪಾಯ ಬೆಳೆಗಾರರು ಕಂಗಾಲು
ಚಿಕ್ಕೋಡಿ: ಕರ್ನಾಟಕ - ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೆಲ ಮಾರುಕಟ್ಟೆಗಳು ಬಂದ್ ಆಗಿವೆ. ಇದರಿಂದ ಗಡಿ ಭಾಗದಲ್ಲಿ ಪಪ್ಪಾಯ ಬೆಳೆದಿರುವ ರೈತರು ಸಂಕಷ್ಟ ಅನುಭವಿಸುವ ಪ್ರಸಂಗ ಎದುರಾಗಿದೆ. ಚಿಕ್ಕೋಡಿ ಉಪವಿಭಾಗದ ಅಥಣಿ, ಕಾಗವಾಡ, ರಾಯಬಾಗ, ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ರೈತರು ಹೆಚ್ಚಾಗಿ ಮಹಾರಾಷ್ಟ್ರದ ಮಾರುಕಟ್ಟೆಗಳನ್ನು ಅವಲಂಬಿತವಾಗಿದ್ದರು. ಸದ್ಯ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆ ರೈತರು ಬೆಳೆ ಮಾರಾಟವಾಗದೇ ಕಂಗಲಾಗಿದ್ದಾರೆ.