ಕರ್ನಾಟಕ

karnataka

By

Published : Dec 28, 2020, 11:25 AM IST

ETV Bharat / videos

ಹೊಸಪೇಟೆಯಲ್ಲಿ ಕರಡಿ ದಾಳಿ : ಇಬ್ಬರ ತಲೆಗೆ ಗಂಭೀರ ಗಾಯ

ಹೊಸಪೇಟೆ : ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ 9ನೇ ವಾರ್ಡ್‌ನ ಕೆರೆಕಾವಲರಟ್ಟಿ ಪ್ರದೇಶದಲ್ಲಿ ಇಬ್ಬರ ಮೇಲೆ ಕರಡಿ ದಾಳಿ ಮಾಡಿ ತಲೆಗೆ ಗಂಭೀರ ಗಾಯಗೊಳಿಸಿದೆ. ‌ಕರಡಿಯು ಮೊದಲು ನಾಗರಾಜ್ ಎಂಬುವರ ಮೇಲೆ ದಾಳಿ ಮಾಡಿದ ನಂತರ ಕರಡಿಯಿಂದ ನಾಗರಾಜ್​ ಬಿಡಿಸಲು ಹೋದ ವೆಂಕಟೇಶ್ ಎಂಬ ವ್ಯಕ್ತಿಯ ಮೇಲೂ ಸಹ ಎರಗಿದೆ. ಇಬ್ಬರಿಗೂ ತಲೆ ಭಾಗ ಹಾಗೂ ಮೈ ಪರಚಿ ಗಾಯಗೊಳಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ABOUT THE AUTHOR

...view details