ಕರ್ನಾಟಕ

karnataka

ರಾಯಗಢ: ಛತ್ರಪತಿ ಶಿವಾಜಿ ಮಹಾರಾಜ್ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ಸಂಭ್ರಮ

By

Published : Jun 6, 2023, 6:28 PM IST

ಶಿವಾಜಿ ಮಹಾರಾಜ್ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ

ರಾಯಗಡ(ಮಹಾರಾಷ್ಟ್ರ): ಛತ್ರಪತಿ ಶಿವಾಜಿ ಮಹಾರಾಜ ರಾಜನಾಗಿ ಪಟ್ಟಾಭಿಷೇಕಗೊಂಡ ದಿನವನ್ನು ಹಿಂದವಿ ಸಾಮ್ರಾಜ್ಯದ ಆರಂಭ ಎಂದು ಹೇಳಲಾಗುತ್ತದೆ. ಹೀಗೆ ಜೂನ್​ 6 ರಂದು ಶಿವಾಜಿ ಗದ್ದುಗೆಯೇರಿದ ಆ ಐತಿಹಾಸಿಕ ದಿನವನ್ನು ಶಿವ ರಾಜ್ಯಾಭಿಷೇಕ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ 350ನೇ ಶಿವರಾಜ್ಯಾಭಿಷೇಕ ಸಮಾರಂಭ ನಡೆಯುವುದರಿಂದ ಶಿವಾಜಿಯ ಕೋಟೆಯಾದ ರಾಯಗಢದಲ್ಲಿ ಇಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. 

ಅಖಿಲ ಭಾರತೀಯ ಶಿವ ರಾಜ್ಯಾಭಿಷೇಕ ಮಹೋತ್ಸವ ಸಮಿತಿಯು ನಿನ್ನೆ ಮತ್ತು ಇಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ರಾಯಗಡದಲ್ಲಿ ಶಿವ ರಾಜ್ಯಾಭಿಷೇಕ ಸೋಹಲಾ ಸಮಿತಿಯ ಮಾರ್ಗದರ್ಶಕ ಸಂಭಾಜಿ ಮಹಾರಾಜ್ ಛತ್ರಪತಿ ಮತ್ತು ಕ್ರೌನ್ ಪ್ರಿನ್ಸ್ ಶಹಾಜಿರಾಜೆ ಛತ್ರಪತಿ ಅವರ ಉಪಸ್ಥಿತಿಯಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಶಿವಾಜಿ ಮಹಾರಾಜರ ಅಭಿಮಾನಿಗಳು ಜಮಾಯಿಸಿದ್ದಾರೆ. 

ಇಂದು ಕೋಟೆಯ ತುದಿಯಲ್ಲಿರುವ ಛತ್ರಪತಿ ಶಿವಾಜಿಯ ಪ್ರತಿಮೆಗೆ ಚಿನ್ನದ ನಾಣ್ಯಗಳ ಅಭಿಷೇಕ ನಡೆಯಲಿದೆ. ಈ ವೇಳೆ ಮಹಾರಾಷ್ಟ್ರದ ಎಲ್ಲಾ ಧರ್ಮದ ಜನರು ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸಿ ಸಾಮಾಜಿಕ ಐಕ್ಯತೆಯನ್ನು ತೋರಿಸುತ್ತಾರೆ. ಪಟ್ಟಾಭಿಷೇಕದ ದಿನದಂದು ಸಾಂಪ್ರದಾಯಿಕ ಜಾನಪದ ಕಲಾ ಮೆರವಣಿಗೆ ನಡೆಯಲಿದೆ. ರಾಜಸದರ್, ನಾಗರಖಾನ, ಹೋಳಿ ಮಾರುಕಟ್ಟೆ, ಮಾರುಕಟ್ಟೆಯಿಂದ ಜಗದೀಶ್ವರ ದೇವಸ್ಥಾನದವರೆಗೆ ಪಲ್ಲಕ್ಕಿಯ ಮಾರ್ಗದಲ್ಲಿ ಪಲ್ಲಕ್ಕಿಯ ಮೇಲೆ ಪುಷ್ಪವೃಷ್ಟಿ ಮಾಡಲಾಗುವುದು.

ಇದನ್ನೂ ನೋಡಿ:ಅಬ್ಬಬ್ಬಾ! ಬಂಡೂರು ತಳಿಯ ಟಗರಿಗೆ ₹ 1.10 ಲಕ್ಷ .. ಖರೀದಿಸಿದ ಖುಷಿಯಲ್ಲಿ ಊರ ತುಂಬಾ ಮೆರವಣಿಗೆ ಮಾಡಿದ ರೈತ

ABOUT THE AUTHOR

...view details