ಕರ್ನಾಟಕ

karnataka

ಗುಲಾಬಿ ಹೂವು ಹಾಸಿನ ಮೂಲಕ ಪ್ರಿಯಾಂಕಾ ಗಾಂಧಿಗೆ ಅದ್ಧೂರಿ ಸ್ವಾಗತ..

By

Published : Feb 25, 2023, 6:11 PM IST

ಗುಲಾಬಿ ಹೂವು ಹಾಸಿನ ಮೂಲಕ ಪ್ರಿಯಾಂಕಾಗೆ ಅದ್ಧೂರಿ ಸ್ವಾಗತ

ರಾಯ್‌ಪುರ(ಛತ್ತೀಸ್​ಗಡ್​):ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಛತ್ತೀಸ್​ಗಢದ ರಾಯ್‌ಪುರ ತಲುಪಿದ್ದಾರೆ. ಹೌದು, ರಾಯ್‌ಪುರ ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಅವರನ್ನು ಸಿಎಂ ಭೂಪೇಶ್ ಬಘೇಲ್, ಪಿಸಿಎಸ್ ಮುಖ್ಯಸ್ಥರು ಸ್ವಾಗತಿಸಿದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಕಾರ್ಯಕರ್ತರು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರಿಗೆ ಭವ್ಯ ಸ್ವಾಗತ ಕೋರಿದರು. ರಸ್ತೆ ತುಂಬಾ ಗುಲಾಬಿ ಹೂವು ಹರಡಲಾಗಿತ್ತು. ವಿಮಾನ ನಿಲ್ದಾಣದಿಂದ ಸಮಾವೇಶ ನಡೆಯುವ ಸ್ಥಳಕ್ಕೆ ತೆರಳುವ ವೇಳೆ ರಸ್ತೆಗಳಲ್ಲಿ ಹೂಮಳೆಯನ್ನೇ ಸುರಿಸಲಾಯಿತು. ಸಮಾವೇಶದಲ್ಲಿ ಪಾಲ್ಗೊಳ್ಳಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಆಗಮಿಸಿದ್ದರು.

ಇದನ್ನೂ ಓದಿ:2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ.. ಪಂಜಾಬ್​​ ಘಟನೆಗೆ ಕಂಗನಾ ರಣಾವತ್ ಪ್ರತಿಕ್ರಿಯೆ

ABOUT THE AUTHOR

...view details