ಕರ್ನಾಟಕ

karnataka

By

Published : Nov 1, 2022, 9:59 PM IST

Updated : Feb 3, 2023, 8:31 PM IST

ETV Bharat / videos

ಸುರತ್ಕಲ್ ಟೋಲ್​​ಗೇಟ್​ ಅನಿರ್ಧಿಷ್ಠಾವಧಿ ಧರಣಿಯಲ್ಲಿ ಗಮನ ಸೆಳೆದ ಕವಿಗೋಷ್ಠಿ

ಸುರತ್ಕಲ್ ಎನ್​ಐಟಿಕೆ ಟೋಲ್ ಗೇಟ್‌ ತೆರವಿಗೆ ಆಗ್ರಹಿಸಿ ನಡೆಸುತ್ತಿರುವ ಹಗಲು ರಾತ್ರಿ ಅನಿರ್ಧಿಷ್ಠಾವಧಿ ಧರಣಿಯಲ್ಲಿ ಇಂದು ಟೋಲ್ ಗೇಟ್ ಕವಿತೆಗಳು ಎಂಬ ಕವಿಗೋಷ್ಠಿ ಗಮನ ಸೆಳೆಯಿತು. ಅಕ್ಟೋಬರ್ 28 ರಂದು ಆರಂಭವಾದ ಹಗಲು ರಾತ್ರಿ ಧರಣಿ 5ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕನ್ನಡ ರಾಜ್ಯೋತ್ಸವ ಆಗಿರುವುದರಿಂದ 'ಟೋಲ್ ಗೇಟ್​ ಕವಿತೆಗಳು' ಕವಿಗೋಷ್ಠಿಯನ್ನು ಧರಣಿಯ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಿಲ್ಸನ್ ಕಟೀಲ್ ಅವರು ವಹಿಸಿದ್ದರು. ಕವಿಗೋಷ್ಠಿಯಲ್ಲಿ ಹಿರಿಯ ಕವಿಗಳಾದ ಮುಹಮ್ಮದ್ ಬಡ್ಡೂರು, ನವೀನ್ ಪಿರೇರಾ ಸುರತ್ಕಲ್, ಸಂವರ್ಥ ಸಾಹಿಲ್, ಹುಸೈನ್ ಕಾಟಿಪಳ್ಳ, ಜೊಸ್ಸಿ ಪಿಂಟೊ ಕಿನ್ನಿಗೋಳಿ, ಅಶುಂತ ಡಿಸೋಜಾ, ಎಂ.ಜಿ. ಹೆಗ್ಡೆ‌ ಕವನ ವಾಚಿಸಿದರೆ,‌ ಜಲೀಲ್ ಮುಕ್ರಿಯವರ ಅನುಪಸ್ಥಿತಿಯಲ್ಲಿ ಅವರ ಕವನಗಳನ್ನು ವಿನೀತ್ ದೇವಾಡಿಗ ವಾಚಿಸಿದರು.
Last Updated : Feb 3, 2023, 8:31 PM IST

ABOUT THE AUTHOR

...view details