ಕರ್ನಾಟಕ

karnataka

By

Published : Jan 31, 2021, 4:48 PM IST

ETV Bharat / videos

ಬಂಗಾಳದಲ್ಲಿ ಕಮಲ ಅರಳಿಸಲು ಪಣ... ಬಿಜೆಪಿಯಿಂದ ಬೃಹತ್ ರ‍್ಯಾಲಿ

ಹೌರಾ (ಪಶ್ಚಿಮ ಬಂಗಾಳ): ಶತಾಯಗತಾಯ ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಲು ಪಣ ತೊಟ್ಟಿರುವ ಕೇಸರಿ ನಾಯಕರು ಪದೇ ಪದೆ ರಾಜ್ಯದಲ್ಲಿ ಬೃಹತ್ ರ‍್ಯಾಲಿಗಳನ್ನು ಆಯೋಜಿಸುತ್ತಿದ್ದಾರೆ. ಇಂದು ಹೌರಾದಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಕೇಂದ್ರ ಸಚಿವರಾದ ಅಮಿತ್​ ಶಾ, ಸ್ಮೃತಿ ಇರಾನಿ ಭಾಗಿಯಾಗಿ ಮಾತನಾಡಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾವು ಬಹುಮತ ಗಳಿಸಿ ಸರ್ಕಾರ ರಚಿಸುತ್ತೇವೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಸಚಿವೆ ಸ್ಮೃತಿ ಇರಾನಿ, ಜೈ ಶ್ರೀರಾಮ್ ಘೋಷಣೆಯನ್ನು ಅವಮಾನಿಸುವ ಪಕ್ಷದಲ್ಲಿ ಯಾರೂ ಉಳಿಯಲ್ಲ. ನಾವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಸುತ್ತಿದ್ದೇವೆ. ಬಂಗಾಳದ ಜನತೆ ರಾಮ ರಾಜ್ಯ ಬಯಸುತ್ತಾರೆ. ಈ ಬಾರಿ ಬಿಜೆಪಿ ಸರ್ಕಾರ ಬರಬೇಕೆಂಬದು ರಾಜ್ಯದ ಜನತೆಯ ಆಸೆ. ನಾವು ಬಹುಮತ ಪಡೆದು ಸರ್ಕಾರ ರಚಿಸುತ್ತೇವೆ ಎಂದರು.

ABOUT THE AUTHOR

...view details