ಕರ್ನಾಟಕ

karnataka

ನಡುರಸ್ತೆಯಲ್ಲೇ ಹೊತ್ತಿ ಉರಿದ ಖಾಸಗಿ ಬಸ್​​.. 50 ಕಾರ್ಮಿಕರು ಪಾರು..

By

Published : Feb 9, 2021, 5:05 PM IST

Published : Feb 9, 2021, 5:05 PM IST

ಆಂಧ್ರಪ್ರದೇಶ : ಒಡಿಶಾದಿಂದ ಗೋಧಾವರಿ ಜಿಲ್ಲೆಯ ಎಸ್​​ಎನ್​ಜಿ ಕಾರ್ಖಾನೆಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಖಾಸಗಿ ಬಸ್​​ಗೆ ಬೆಂಕಿ ತಗುಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದಿದೆ. ಪೂರ್ವ ಗೋಧಾವರಿ ಜಿಲ್ಲೆಯ ಜಗ್ಗಮ್​ಪೇಟ್​​​ಗೆ ಆಗಮಿಸುವ ಪಾಯಕರಾವ್​​ಪೇಟ್​​ಯ ರಾಷ್ಟ್ರೀಯ ಹೆದ್ದಾರಿ ಬಳಿ ದುರ್ಘಟನೆ ಸಂಭವಿಸಿದೆ. ಬಸ್​​​​ನಲ್ಲಿ 50 ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಬಸ್​​​ನ ಟೈರ್‌ ಸ್ಫೋಗೊಂಡ ಪರಿಣಾಮ ಬೆಂಕಿ ಕಾಣಿಸಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್​ನಲ್ಲಿ ಹೊಗೆ ಕಾಣಿಸಿದ ತಕ್ಷಣ ಪ್ರಯಾಣಿಕರಿಗೆ ಎಚ್ಚರಿಸಿ ಬಸ್​ ನಿಲ್ಲಿಸಿದ್ದಾನೆ.

ABOUT THE AUTHOR

...view details