ಕರ್ನಾಟಕ

karnataka

ವಿಜಯಪುರದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಆರ್​.ಅಶೋಕ್​​

By

Published : Aug 26, 2020, 11:44 AM IST

ಸಚಿವ ಆರ್.ಅಶೋಕ್​​ ವಿಜಯಪುರದ ಗಜಾನನ ಉತ್ಸವ ಮಹಾಮಂಡಳಿ ವತಿಯಿಂದ ಪ್ರತಿಷ್ಢಾಪಿಸಿದ್ದ ಗಣೇಶ ಮೂರ್ತಿಯ ದರ್ಶನ ಪಡೆದರು.

Vijayapur
ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಆರ್​. ಅಶೋಕ..

ವಿಜಯಪುರ: ಜಿಲ್ಲಾ ಪ್ರವಾಸದಲ್ಲಿರುವ ಕಂದಾಯ ಸಚಿವ ಆರ್.ಅಶೋಕ್​ ಇಂದು ಬೆಳಗ್ಗೆ ವಿಜಯಪುರದಲ್ಲಿ ಗಣೇಶನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಆರ್​.ಅಶೋಕ್​​

ವಿಜಯಪುರದ ಗಜಾನನ ಉತ್ಸವ ಮಹಾಮಂಡಳಿ ವತಿಯಿಂದ ಪ್ರತಿಷ್ಢಾಪಿಸಿದ್ದ ಗಣೇಶನ ಮೂರ್ತಿಯ ದರ್ಶನ ಪಡೆದು ಮಂಗಳಾರತಿಯನ್ನು ನೆರವೇರಿಸಿದರು. ನಂತರ ನಗರದ ಶಿವಾಜಿ ಸರ್ಕಲ್​​ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಸಚಿವರ ಜತೆ ಶಾಸಕ ರಾಜುಗೌಡ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜಯಪುರ ಬಿಜೆಪಿ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಮಹಾಮಂಡಳದ ಅಧ್ಯಕ್ಷ ಮಹೇಶ ಕುಂಬಾರ ಉಪಸ್ಥಿತರಿದ್ದರು.

ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಆರ್​. ಅಶೋಕ್​​

ಈ ಸಂದರ್ಭದಲ್ಲಿ ಸಚಿವರಿಗೆ ಹಾಗೂ ಶಾಸಕರಿಗೆ ಗಣೇಶ ಮಹಾಮಂಡಳದಿಂದ ಪದಾಧಿಕಾರಿಗಳು ಸನ್ಮಾನಿಸಿದರು.

ABOUT THE AUTHOR

...view details