ಕರ್ನಾಟಕ

karnataka

By

Published : Aug 14, 2019, 9:39 AM IST

ETV Bharat / state

ನೆರೆ ಸಂತ್ರಸ್ತ ಕಂದಮ್ಮಗಳಿಗಾಗಿ ಮಿಡಿದ ಮನ... ಸ್ಪರ್ಧೆಯಲ್ಲಿ ಗೆದ್ದ ಹಣದಿಂದ ತೊಟ್ಟಿಲು ಕೊಡಿಸಿದ ಬಾಲಕಿ

ವಿಧಾನ ಪರಿಷತ್ ಸದಸ್ಯ ಸುನೀಲ ಗೌಡ ಬಿ. ಪಾಟೀಲ್​ ಅವರ ಪುತ್ರಿ ಸಾನ್ವಿ ಎಸ್. ಪಾಟೀಲ್, ನೆರೆ ಸಂತ್ರಸ್ತ ಕುಟುಂಬಗಳ ಹಸುಗೂಸುಗಳಿಗೆ ತೊಟ್ಟಿಲುಗಳನ್ನು ಕೊಡಿಸಿದ್ದಾಳೆ.

ಸಾನ್ವಿ ಎಸ್.ಪಾಟೀಲ್

ವಿಜಯಪುರ: ಉತ್ತರ ಕರ್ನಾಟಕ ಪ್ರವಾಹದ ಹೊಡೆತಕ್ಕೆ ಸಿಕ್ಕಿ ನಲುಗುತ್ತಿದೆ. ಮನೆ ಮತ್ತು ಅಗತ್ಯ ವಸ್ತುಗಳನ್ನು ಕಳೆದುಕೊಂಡು ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಅಂತಹ ನಿರಾಶ್ರಿತರಲ್ಲಿ ಹಸುಗೂಸುಗಳು ಕೂಡ ಸೇರಿರುವುದರಿಂದ, ಆ ಮುದ್ದು ಕಂದಮ್ಮಗಳಿಗೆ ಬೇಕಿರುವ ಅಗತ್ಯ ಸಾಮಗ್ರಿಗಳನ್ನು ನೀಡುವ ಮೂಲಕ ಎಂಎಲ್​​ಸಿ ಅವರ ಪುತ್ರಿ ಇತರರಿಗೂ ಮಾದರಿಯಾಗಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸುನೀಲ ಗೌಡ ಬಿ. ಪಾಟೀಲ್​ ಅವರ ಪುತ್ರಿ ಸಾನ್ವಿ ಎಸ್.ಪಾಟೀಲ್ ಜನಮೆಚ್ಚುವ ಕಾರ್ಯ ಮಾಡಿರುವ ಬಾಲಕಿ. ಸಾನ್ವಿ ಬಿ.ಎಂ. ಪಾಟೀಲ್ ಪಬ್ಲಿಕ್ ಸ್ಕೂಲ್​ನ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಭಾನುವಾರ ಬಾಗಲಕೋಟೆಯಲ್ಲಿ ನಡೆದಿದ್ದ ಬ್ಯಾಡ್ಮಿಂಟನ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಳು. ಅದರಲ್ಲಿ ತಮಗೆ ಬಂದ ಬಹುಮಾನದ ಹಣದಲ್ಲಿ ನೆರೆ ಸಂತ್ರಸ್ತ ಕುಟುಂಬಗಳ ಹಸುಗೂಸುಗಳ ರಕ್ಷಣೆಗಾಗಿ ತೊಟ್ಟಿಲುಗಳನ್ನು ಕೊಡಿಸಿದ್ದಾಳೆ.

ಮುದ್ದೇಬಿಹಾಳ ಸಂತ್ರಸ್ತರ ಕೇಂದ್ರಗಳಲ್ಲಿ ತಾಯಂದಿರು ತಮ್ಮ ಕಂದಮ್ಮಗಳಿಗೆ ಈ ತೊಟ್ಟಿಲುಗಳನ್ನು ಬಳಸುತ್ತಿದ್ದಾರಂತೆ. ಸಾನ್ವಿಯ ಈ ಉದಾರತೆ ಮತ್ತು ಮಾನವೀಯ ಗುಣ ಉಳಿದ ವಿದ್ಯಾರ್ಥಿಗಳಿಗೂ ಮಾದರಿಯಾಗಿದೆ.

ABOUT THE AUTHOR

...view details