ಕರ್ನಾಟಕ

karnataka

By

Published : Jul 24, 2019, 11:34 PM IST

Updated : Jul 25, 2019, 10:42 AM IST

ETV Bharat / state

ಮನೆಗೆ ಮರಳಿದ ಅತೃಪ್ತ ಕಾಂಗ್ರೆಸ್‌ ಶಾಸಕ ಶಿವರಾಮ ಹೆಬ್ಬಾರ..

ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬುಧವಾರ ಮುಂಬೈಯಿಂದ ಮನೆಗೆ ವಾಪಸ್​ ಆಗಿದ್ದಾರೆ. ಗುರುವಾರ ಬೆಂಗಳೂರಿಗೆ ತೆರಳುವುದಾಗಿ ದೂರವಾಣಿಯಲ್ಲಿ ತಿಳಿಸಿದ್ದಾರೆ.

ಮನೆಗೆ ವಾಪಾಸ್​ ಆದ ಅತೃಪ್ತ ಶಾಸಕ ಶಿವರಾಮ ಹೆಬ್ಬಾರ

ಶಿರಸಿ: ಅತೃಪ್ತ ಶಾಸಕರಲ್ಲಿ ಒಬ್ಬರಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶಿವರಾಮ ಹೆಬ್ಬಾರ್ ಮುಂಬೈನಿಂದ ಮನೆಗೆ ವಾಪಸ್​ ಆಗಿದ್ದಾರೆ. ಯಲ್ಲಾಪುರ ಪಟ್ಟಣದಲ್ಲಿರುವ ಸ್ವಂತ ಮನೆಗೆ ಬುಧವಾರ ಸಂಜೆಯ ವೇಳೆ ಆಗಮಿಸಿದ್ದಾರೆ.

ಮನೆಗೆ ವಾಪಾಸ್​ ಆದ ಅತೃಪ್ತ ಶಾಸಕ ಶಿವರಾಮ ಹೆಬ್ಬಾರ

ಮುಂಬೈನಿಂದ ನೇರವಾಗಿ ಮನೆಗೆ ಹಿಂತಿರುಗಿರುವುದು ಯಾರಿಗೂ ತಿಳಿಸದಂತೆ ಆಪ್ತರಿಗೆ ಶಾಸಕರು ಸೂಚಿಸಿದ್ದಾರೆ ಎನ್ನಲಾಗಿದೆ. ಮನೆಯ ಮುಂದಿನ ಗೇಟ್​ಗೆ ಬೀಗ ಹಾಕಿ ಶಾಸಕರ ಭೇಟಿಗೆ ಸಂಜೆ ವೇಳೆ ಆಗಮಿಸಿದ್ದ ಯಾರೊಬ್ಬರಿಗೂ ಸೆಕ್ಯುರಿಟಿ ಅವಕಾಶ ನೀಡಿಲ್ಲ. ನಾಳೆ ಬೆಳಗ್ಗೆ ಬೆಂಗಳೂರಿಗೆ ತೆರಳುವುದಾಗಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಈಟಿವಿ ಭಾರತ ಪ್ರತಿನಿಧಿಗೆ ತಿಳಿಸಿದ್ದಾರೆ. ಹೆಚ್ಚಿನ ವಿವರಣೆ ನೀಡಲು ಅವರು ನಿರಾಕರಿಸಿದ್ದಾರೆ.

Last Updated : Jul 25, 2019, 10:42 AM IST

For All Latest Updates

TAGGED:

ABOUT THE AUTHOR

...view details