ಕಾರವಾರ: ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮದಲ್ಲಿ ತಲೆ ಎತ್ತಿರುವ ಭವ್ಯ ಒಕ್ಕಲಿಗರ ಸಮುದಾಯ ಭವನವನ್ನು ಇಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ಒಕ್ಕಲಿಗರ ಸಂಘ, ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದಲ್ಲಿ ನಿರ್ಮಾಣಗೊಂಡಿರುವ ಭವ್ಯ ಸಮುದಾಯ ಭವನ ಹೊನ್ನಾವರ ಭಾಗದ ಸುತ್ತಮುತ್ತ ಭಾಗದ ಜನರಿಗೆ ಲಭ್ಯವಾಗಿದೆ.
ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಬಡತನದ ನಡುವೆಯೂ ಇಂದು ಒಕ್ಕಲಿಗ ಸಮುದಾಯ ಒಂದಾಗಿದೆ. ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದ ಕೆ.ಎಚ್.ರಾಮಯ್ಯ ಅವರು ಈ ಹಿಂದೆ ಒಕ್ಕಲಿಗ ಸಂಘವನ್ನು ಒಟ್ಟುಗೂಡಿಸಿದರು. ಒಂದು ಮಠಕ್ಕೆ ಪ್ರೋತ್ಸಾಹ ನೀಡಿದರೆ ಸಮಾಜದಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಹೀಗಾದರೇ ಮಾತ್ರ ಸಮಾಜ ಉದ್ದಾರ ಆಗುತ್ತದೆ ಎಂದರು.