ಶಿರಸಿ:ರಾಜ್ಯದಾದ್ಯಂತ ಸೋಮವಾರ ಮಧ್ಯರಾತ್ರಿಯಿಂದಲೇ ಲಾಕ್ಡೌನ್ ಇದ್ದರೂ ಸಹ ಉತ್ತರಕನ್ನಡ ಜಿಲ್ಲಾ ಗಡಿಗಳಲ್ಲಿ ತಪಾಸಣೆ ನಡೆಯುತ್ತಿಲ್ಲ.
ಶಿರಸಿಯಲ್ಲಿ ಚೆಕ್ ಪೋಸ್ಟ್ ತಪಾಸಣೆ ಇಲ್ಲದೆ ನೂರಾರು ಜನರ ಪ್ರವೇಶ
ರಾಜ್ಯದಾದ್ಯಂತ ಲಾಕ್ಡೌನ್ ಇದ್ದರೂ ಸಹ ಉತ್ತರಕನ್ನಡ ಜಿಲ್ಲಾ ಗಡಿಗಳಲ್ಲಿ ಪೊಲೀಸರು ಜಿಲ್ಲೆ ಪ್ರವೇಶ ತಪಾಸಣೆ ನಡೆಯುತ್ತಿಲ್ಲ.
ಚೆಕ್ ಪೋಸ್ಟ್ ಇಲ್ಲದೇ ನೂರಾರು ಜನರ ಪ್ರವೇಶ
ಜಿಲ್ಲೆಗೆ ಬೆಂಗಳೂರಿನಿಂದ ಜನರು ಅಗಮಿಸುತ್ತಿದ್ದು, ಯಾವುದೇ ತಪಾಸಣೆ ಇಲ್ಲದೆ ಜನ ಊರು ಸೇರುತ್ತಿದ್ದಾರೆ. ಜೊತೆಗೆ ಸೋಮವಾರ ಇದ್ದ ತಪಾಸಣಾ ಕಾರ್ಯ ಇಂದು ಮುಂಜಾನೆ ನಡೆಯುತ್ತಿಲ್ಲ. ಉತ್ತರ ಕನ್ನಡ, ಶಿವಮೊಗ್ಗ ಗಡಿಯಲ್ಲಿದ್ದ ಕವಂಚೂರು ಚೆಕ್ಪೋಸ್ಟ್ ನಾಪತ್ತೆಯಾಗಿದ್ದು, ಖಾಸಗಿ ಬಸ್, ಟಿ.ಟಿ ಹಾಗೂ ಕಾರ್ಗಳಲ್ಲಿ ಜನರು ಅಗಮಿಸುತ್ತಿದ್ದಾರೆ. ತಪಾಸಣೆ ಇಲ್ಲದೇ ಜನರು ಆಗಮಿಸುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದ್ದು, ಆಡಳಿತದ ಕಾರ್ಯವೈಖರಿಗೆ ಜನ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.