ಕರ್ನಾಟಕ

karnataka

ETV Bharat / state

ಪ್ರವಾಸಿಗರೇ ಮಲ್ಪೆ ಬೀಚ್​ ಕಡೆ ಹೋದಿರಾ ಜೋಕೆ...! ಕಾರಣ ಇಲ್ಲಿದೆ ನೋಡಿ

ಪಶ್ಚಿಮ ಕರಾವಳಿಯ ಪ್ರಧಾನ ಆಕರ್ಷಣೆ ಮಲ್ಪೆ ಬೀಚ್. ಆದ್ರೆ ಮುಂಗಾರಿನ ಅಬ್ಬರ, ವಾಯು ಮಾರುತದ ಆರ್ಭಟಕ್ಕೆ ಈ ಬೀಚ್ ಕಣ್ಮರೆಯಾಗಿದೆ. ಇನ್ನೂ ಹತ್ತು ದಿನಗಳ ಕಾಲ ಪ್ರವಾಸಿಗರು ಮಲ್ಪೆ ಬೀಚ್ ನಿಂದ ದೂರವಿದ್ದರೆ ವಾಸಿ ಅಂತಿದಾರೆ ಕಡಲತೀರದ ನಿವಾಸಿಗಳು.

By

Published : Jun 14, 2019, 2:45 PM IST

ಬೀಚ್​ನ್ನೇ ನುಂಗಿ ಹಾಕಿದ ಬೃಹತ್​ ಸಮುದ್ರದಲೆಗಳು

ಉಡುಪಿ: ಜಿಲ್ಲೆಯ ಪಶ್ಚಿಮ ಕರಾವಳಿಯ ಪ್ರಧಾನ ಆಕರ್ಷಣೆ ಮಲ್ಪೆ ಬೀಚ್. ಆದ್ರೆ ಮುಂಗಾರಿನ ಅಬ್ಬರ, ವಾಯು ಮಾರುತದ ಆರ್ಭಟಕ್ಕೆ ಈ ಬೀಚ್ ಕಣ್ಮರೆಯಾಗಿದೆ. ಇನ್ನೂ ಹತ್ತು ದಿನಗಳ ಕಾಲ ಪ್ರವಾಸಿಗರು ಮಲ್ಪೆ ಬೀಚ್ ನಿಂದ ದೂರವಿದ್ದರೆ ವಾಸಿ ಅಂತಿದಾರೆ ಕಡಲತೀರದ ನಿವಾಸಿಗಳು.

ಬೀಚ್​ನ್ನೇ ನುಂಗಿ ಹಾಕಿದ ಬೃಹತ್​ ಸಮುದ್ರದಲೆಗಳು

ಈ ರಾಕ್ಷಸ ಗಾತ್ರದ ಕಡಲಿನ ಅಲೆಗಳು ಮಲ್ಪೆ ಬೀಚ್ ಅನ್ನೇ ನುಂಗಿಹಾಕಿವೆ. ಸುಮಾರು 30 ಅಡಿಗಳಷ್ಟು ಬೀಚ್​ನ ಭೂಭಾಗ ಸಮುದ್ರ ಪಾಲಾಗಿದೆ. ಕಡಲತಡಿಯಲ್ಲಿ ಲೋಡುಗಟ್ಟಲೇ ಕಸದ ರಾಶಿ ಬಿದ್ದಿದೆ. ಕರಾವಳಿ ತೀರಕ್ಕೆ ಮುಂಗಾರು ಅತಿಯಾದ ಅಬ್ಬರದಿಂದಲೇ ಪ್ರವೇಶಿಸಿದೆ. ಕಳೆದ ಎರಡು ದಿನಗಳಿಂದ ಮಾರುತಗಳ ಆರ್ಭಟ ಜೋರಾಗಿತ್ತು. ಇದೀಗ ಜಬರ್ ದಸ್ತ್ ಮಳೆಯ ಸಹಿತ ಮುಂಗಾರು ಎಂಟ್ರಿಕೊಟ್ಟಿದೆ. ಇದಕ್ಕೆಲ್ಲಾ ಕಾರಣ ಗುಜರಾತ್​ನಲ್ಲಿ ಕಾಣಿಸಿಕೊಂಡಿರುವ ‘ವಾಯು’ ಚಂಡಮಾರುತ. ಈ ಚಂಡಮಾರುತದ ಪ್ರಭಾವ ಸ್ವಲ್ಪ ಪ್ರಮಾಣದಲ್ಲಿ ಮಲ್ಪೆ ಬೀಚ್ ಮೇಲೂ ಉಂಟಾಗುತ್ತಿದ್ದು, ನಾಲ್ಕಾರು ಅಡಿ ಎತ್ತರದ ಅಲೆಗಳು ನುಗ್ಗಿ ಬರುತ್ತಿವೆ.

ಮುಂಗಾರಿನ ಪೂರ್ವ ಸೂಚನೆ ಇಲ್ಲದೆ ಈಗಲೂ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಕಡಲಿನ ಆರ್ಭಟ ಕಂಡು ವಾಪಸಾಗುತ್ತಿದ್ದಾರೆ. ಕುತೂಹಲದಿಂದ ಬರುವ ಪ್ರವಾಸಿಗರನ್ನು ತಡೆಯೋದೇ ಸ್ಥಳೀಯರಿಗೆ ದೊಡ್ಡ ತಲೆನೋವಾಗಿದೆ. ಹಾಗಾಗಿ ಸದ್ಯ 10 ದಿನಗಳ ಕಾಲ ಪ್ರವಾಸಿಗರು ಇತ್ತಕಡೆ ಮುಖ ಮಾಡದಿರುವುದೇ ಒಳ್ಳೇದು ಅನ್ನುತ್ತೆ ಜಿಲ್ಲಾಡಳಿತ.

ಕೇವಲ ಮಲ್ಪೆ ಮಾತ್ರವಲ್ಲ, ಪಕ್ಕದ ಪಡುಕೆರೆ ಬೀಚ್​ನಲ್ಲೂ ಅಲೆಗಳು ಧುಮ್ಮಿಕ್ಕಿ ಹರಿಯುತ್ತಿದೆ. ಈ ಭಾಗದಲ್ಲಿ ಕಡಲಕೊರೆತ ಜೋರಾಗಿದ್ದು ಮನೆಗಳು ಅಪಾಯದಲ್ಲಿವೆ. ಸಮುದ್ರದ ನೀರು ರಸ್ತೆಯತ್ತ ಧುಮ್ಮಿಕ್ಕಿ ಬರುತ್ತಿದೆ. ಉಡುಪಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನೂ ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.

For All Latest Updates

ABOUT THE AUTHOR

...view details