ಕರ್ನಾಟಕ

karnataka

By

Published : Jan 30, 2020, 8:43 AM IST

ETV Bharat / state

ಮದ್ದು-ಗುಂಡು ಅಂಗಡಿಗೆ ಹೊಕ್ಕು 4 ಬಂದೂಕು ಕದ್ದ ಖದೀಮರು

ಬಂದೂಕು ಅಂಗಡಿಯ ಮಾಡಿನ ಹಂಚು ತೆಗೆದು ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಹೆಬ್ರಿ ಪಟ್ಟಣದಲ್ಲಿ ನಡೆದಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

gun-theft-in-udupi-district-hebri
ಮದ್ದು ಗುಂಡು ಅಂಗಡಿಗೆ ಕನ್ನ ಹಾಕಿದ ಖದೀಮರು

ಉಡುಪಿ:ಮದ್ದು-ಗುಂಡು ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ನಾಲ್ಕು ಬಂದೂಕುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೋವಿ ಮದ್ದು-ಗುಂಡುಗಳ ವ್ಯಾಪಾರಸ್ಥ ರೋಹಿದಾಸ್​ ಶೆಣೈ ಎಂಬುವವರಿಗೆ ಸೇರಿದ್ದ ಅಂಗಡಿಗೆ ರಾತ್ರಿ ನುಗ್ಗಿದ ಖದೀಮರು, ಅಂಗಡಿಯ ಮಾಡಿನ ಹಂಚು ತೆಗೆದು ಒಳನುಗ್ಗಿ 4 ನಾಡ ಬಂದೂಕು ಕಳ್ಳತನ ಮಾಡಿದ್ದಾರೆ.

ಪ್ರಕರಣ ಹೆಬ್ರಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಪೊಲೀಸರು ಬೀಸಿದ್ದಾರೆ.

ABOUT THE AUTHOR

...view details