ಕರ್ನಾಟಕ

karnataka

ಒಂದೇ ದಿನ ನೂರಕ್ಕೂ ಹೆಚ್ಚು ವಾಹನ ಜಪ್ತಿ: ಒಂದು ಲಕ್ಷಕ್ಕೂ ಹೆಚ್ಚು ದಂಡ ವಸೂಲಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಕೊರೊನಾ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ಸಂಚಾರ ಮಾಡಿದ ನೂರಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್​ ಮಾಡಿ ಒಂದು ಲಕ್ಷಕ್ಕೂ ಹೆಚ್ಚಿನ ದಂಡದ ಮೊತ್ತ ವಸೂಲಿ ಮಾಡಿದ್ದಾರೆ.

By

Published : Apr 28, 2021, 9:35 PM IST

Published : Apr 28, 2021, 9:35 PM IST

fine
fine

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ ಅಂಗಡಿಯ ಮಾಲೀಕರ ವಿರುದ್ಧ THE KARNATAKA EPIDEMIC DISEASES ACT, 2020 ಕಾಯ್ದೆಯ ಅಡಿ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣವನ್ನು ದಾಖಲಿಸಲಾಗಿದೆ.

ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರ ಒಟ್ಟು 100 ವಾಹನಗಳನ್ನು (88 ದ್ವಿ ಚಕ್ರ ವಾಹನಗಳು ಮತ್ತು 12 ಕಾರುಗಳನ್ನು) ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತು ಐಎಂವಿ ಕಾಯ್ದೆ ಅಡಿ ಒಟ್ಟು 245 ಪ್ರಕರಣಗಳನ್ನು ದಾಖಲಿಸಿ 1,16,600 ರೂ ದಂಡವನ್ನು ವಸೂಲಿ ಮಾಡುವ ಮೂಲಕ ಅನಗತ್ಯವಾಗಿ ಓಡಾಡುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ABOUT THE AUTHOR

...view details