ಕರ್ನಾಟಕ

karnataka

ಸ್ವಾತಂತ್ರ್ಯಹೋರಾಟಗಾರ, ಮಾಜಿ ಎಂಎಲ್​​ಸಿ ಜಿ.ಮಾದಪ್ಪ ನಿಧನ

By

Published : Feb 5, 2020, 2:22 PM IST

Updated : Feb 5, 2020, 3:24 PM IST

ಸ್ವಾತಂತ್ರ್ಯಹೋರಾಟಗಾರ, ಮಾಜಿ ವಿಧಾನಸಭಾ ಸದಸ್ಯರಾದ ಜಿ.ಮಾದಪ್ಪ ಇಂದು‌ ಮಣಿಪಾಲದಲ್ಲಿ ಕೊನೆಯುಸಿರೆಳದಿದ್ದಾರೆ.

former-mlc-g-madappa-passes-away
former-mlc-g-madappa-passes-away

ಶಿವಮೊಗ್ಗ: ಸ್ವಾತಂತ್ರ್ಯಹೋರಾಟಗಾರರು, ಮಾಜಿ ವಿಧಾನಸಭಾ ಸದಸ್ಯರಾದ ಜಿ.ಮಾದಪ್ಪ ಇಂದು‌ ಮಣಿಪಾಲದಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದ ಹಿನ್ನೆಲೆ ಮಾದಪ್ಪನವರುಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರಿಗೆ 90 ವರ್ಷ ವಯಸ್ಸಾಗಿತ್ತು. ಜಿಲ್ಲೆಯ ಹಿರಿಯ ಜೆಡಿಎಸ್ ಮುಖಂಡಾಗಿದ್ದ ಇವರು ದಿವಂಗತ ಜೆ.ಹೆಚ್.ಪಟೇಲರ ನಿಕಟವರ್ತಿಯಾಗಿದ್ದರು.

ಮೃತ ಪಾರ್ಥಿವ ಶರೀರದ ಅಂತಿಮ ದರ್ಶವನ್ನು ಶಿವಮೊಗ್ಗದ ಗಾಂಧಿನಗರದ ನಿವಾಸದಲ್ಲಿ ಮಧ್ಯಾಹ್ನ 3 ಗಂಟೆಯಿಂದ ನಾಳೆ ಬೆಳಗ್ಗೆ 10 ಗಂಟೆ ತನಕ ಇಡಲಾಗುವುದು. ನಂತರ ಹೊನ್ನಾಳಿ ತಾಲೂಕು ಯರೇಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Last Updated : Feb 5, 2020, 3:24 PM IST

ABOUT THE AUTHOR

...view details