ಕರ್ನಾಟಕ

karnataka

ETV Bharat / state

ಮೀಸಲಾತಿ ಅರ್ಥ ಕಳೆದುಕೊಳ್ತಿದೆ: ಕೇಂದ್ರ ಸಚಿವ ನಾರಾಯಣಸ್ವಾಮಿ

ಮುಖ್ಯಮಂತ್ರಿಗಳಿಗೆ ಗೆರೆ ಹಾಕಿ ಮೀಸಲಾತಿ ನೀಡಬೇಕು ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದರು.

By

Published : Dec 23, 2022, 5:58 PM IST

Union Minister Narayanaswamy
ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಪದ ಅರ್ಥ ಕಳೆದುಕೊಳ್ಳುತ್ತಿದೆ:ಕೇಂದ್ರ ಸಚಿವ ನಾರಾಯಣಸ್ವಾಮಿ

ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ನಾರಾಯಣಸ್ವಾಮಿ

ರಾಮನಗರ: ದೇಶ ಹಾಗೂ ರಾಜ್ಯದ ಅನೇಕ ಸ್ವಾಮೀಜಿಗಳೂ ಸೇರಿದಂತೆ ಕೆಲವರು ಮೀಸಲಾತಿ ಪದದ ಅರ್ಥಕ್ಕೆ ಮಸಿ ಬಳಿಯುತ್ತಿದ್ದಾರೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ರಾಮನಗರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಮಿತಿಗೆ ಒಂದು ದೃಷ್ಟಿಕೋನ ಇತ್ತು. ಯಾವ ಸಮುದಾಯ ಮುಖ್ಯವಾಹಿನಿ‌ ಬಂದಿರಲಿಲ್ಲವೋ ಅಂಥವರಿಗೆ ಮೀಸಲಾತಿ ಕೊಡಲಾಗಿತ್ತು. ಈ ಮುಖೇನ ಈಗಾಗಲೇ ದೇಶದ ಶೇ 90ರಷ್ಟು ವರ್ಗಗಳು ಮೀಸಲಾತಿಯಡಿ ಬಂದಿವೆ ಎಂದರು.

ಮುಖ್ಯಮಂತ್ರಿಗಳಿಗೆ ಗೆರೆ ಹಾಕಿ ಮೀಸಲಾತಿ ನೀಡಬೇಕು ಎನ್ನುವುದು ಸರಿಯಲ್ಲ. ಯಾರಿಗೆ ಅನ್ಯಾಯ ಆಗುತ್ತಿದೆ, ಅವರು ಮೀಸಲಾತಿ ಕೇಳಿದರೆ ತಪ್ಪಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೀಸಲಾತಿ ಕೇಳುತ್ತಿದ್ದಾರೆ ಎಂದರು.

ಇದನ್ನೂ ಓದಿ:ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಸಿ ಪಿ ಯೋಗೇಶ್ವರ್​ ವಾಗ್ದಾಳಿ

ABOUT THE AUTHOR

...view details