ಕರ್ನಾಟಕ

karnataka

ETV Bharat / state

ಟೊಯೋಟಾ ಬಿಡದಿ ಘಟಕದಲ್ಲಿ ಹೊಸ ಯೋಜನೆಗಳಿಗೆ ಚಾಲನೆ ಕೊಟ್ಟ ಸಚಿವ ಅಶ್ವತ್ಥ​ ನಾರಾಯಣ್

ಟೊಯೋಟಾ ಕಂಪನಿಯ ಬಿಡದಿ ಘಟಕದಲ್ಲಿ ಎರಡು ಮಹತ್ವದ ಯೋಜನೆಗಳಿಗೆ ಸಚಿವ ಅಶ್ವತ್ಥ​ ನಾರಾಯಣ್ ಚಾಲನೆ ನೀಡಿದರು.

By

Published : Jun 27, 2022, 7:32 AM IST

Minister Ashwath Narayan gave drive to new projects in bidadi unit of Toyota
ಟೊಯೋಟಾ ಬಿಡದಿ ಘಟಕದಲ್ಲಿ ಹೊಸ ಯೋಜನೆಗಳಿಗೆ ಚಾಲನೆ ಕೊಟ್ಟ ಸಚಿವ ಅಶ್ವತ್ಥ್​ ನಾರಾಯಣ್

ರಾಮನಗರ: ಕಾರುಗಳ ತಯಾರಿಕೆಗೆ ಹೆಸರಾದ ಟೊಯೋಟಾ ಕಂಪನಿಯ ಬಿಡದಿ ಘಟಕದಲ್ಲಿ ಎರಡು ಮಹತ್ವದ ಉಪಕ್ರಮಗಳಿಗೆ ಭಾನುವಾರ ಸಚಿವ ಡಾ.ಸಿ.ಎನ್ ಅಶ್ವತ್ಥ​ ನಾರಾಯಣ್ ಚಾಲನೆ ಕೊಟ್ಟರು. ಈ ಎರಡು ಕಾರ್ಯಯೋಜನೆಗಳು ಭಾರತದ ಸ್ವಾವಲಂಬನೆಗೆ ಪೂರಕವಾಗುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಭಾರತದಲ್ಲೇ ತಯಾರಿಸಿ (ಮೇಕ್ ಇನ್ ಇಂಡಿಯಾ) ’ ಹಾಗೂ ‘ಕೌಶಲ್ಯ ಭಾರತ’ (ಸ್ಕಿಲ್ ಇಂಡಿಯಾ) ಕರೆಗಳಿಗೆ ಅನುಗುಣವಾಗಿವೆ ಎಂದು ಹೇಳಲಾಗಿದೆ.

ಟೊಯೋಟಾ ಬಿಡದಿ ಘಟಕದಲ್ಲಿ ಸಚಿವ ಅಶ್ವತ್ಥ್​ ನಾರಾಯಣ್

ಮೊದಲನೇ ಕಾರ್ಯಯೋಜನೆಯು ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯ ಮೂಲ ಸೌಕರ್ಯದ ವಿಸ್ತರಣೆ ಒಳಗೊಂಡಿದೆ. ಇದನ್ನು ಟೊಯೋಟಾ ಕಿರ್ಲೊಸ್ಕರ್ ಮೋಟಾರ್ ನಿರ್ವಹಿಸಲಿದೆ. ಇದು ಯುವಕರಿಗೆ ಸುಧಾರಿತ ವಾಹನ ತಂತ್ರಜ್ಞಾನದಲ್ಲಿ ತರಬೇತಿ ನೀಡುವ ಉದ್ದೇಶ ಹೊಂದಿದೆ. ಎರಡನೇ ಕಾರ್ಯಯೋಜನೆಯು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ವೇಗ ನೀಡುವ ನಿಟ್ಟಿನಲ್ಲಿ ಅಗತ್ಯ ಬಿಡಿ ಭಾಗಗಳ ಉತ್ಪಾದನೆಗೆ ಸಂಬಂಧಿಸಿದ್ದು, ಇದನ್ನು, ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ನಿರ್ವಹಿಸಲಿದೆ.

ಟೊಯೋಟಾ ಬಿಡದಿ ಘಟಕದಲ್ಲಿ ಸಚಿವ ಅಶ್ವತ್ಥ್​ ನಾರಾಯಣ್

ಇದನ್ನೂ ಓದಿ:ಸೈಕ್​​​​ ಆಸ್ಟ್ರೈಡ್​ ಮಿಷನ್ ಉಡ್ಡಯನ ರದ್ದುಗೊಳಿಸಿ ನಾಸಾ: ಏನಿದು ಯೋಜನೆ?

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪಾಂಡೆ ಅವರು, ಟೊಯೊಟಾ ಕಂಪನಿಯು ಇತ್ತೀಚೆಗೆ 4,800 ಕೋಟಿ ರೂಪಾಯಿಗಳ ಮೊತ್ತದ ಒಡಂಬಡಿಕೆ ಮಾಡಿಕೊಂಡಿತ್ತು. ಅದರ ಭಾಗವಾಗಿ ಇ-ಡ್ರೈವ್ ತಯಾರಿಕಾ ಸವಲತ್ತು ಇಲ್ಲಿ ಸ್ಥಾಪನೆಯಾಗಲಿದೆ. ಇದನ್ನು ಟಿಕೆಎಪಿ ನಿರ್ವಹಿಸಲಿದ್ದು, ಕಾರ್ಯ ಯೋಜನೆಯು ಸುಸ್ಥಿರ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ವೇಗ ನೀಡಲಿದೆ. ಇದು ಇ-ವಾಹನಗಳ ದೇಶೀಯ ಮಾರುಕಟ್ಟೆ ಬೇಡಿಕೆ ಪೂರೈಸಲು ಮಾತ್ರವಲ್ಲದೇ ರಫ್ತು ವಹಿವಾಟಿಗೂ ಸಹಕಾರಿಯಾಗಲಿದೆ. ಜೊತೆಗೆ ಇಂಗಾಲ ಮಾಲಿನ್ಯ ತಡೆಗಟ್ಟುವ ದಿಸೆಯಲ್ಲಿ ಕೇಂದ್ರ ಸರ್ಕಾರದ ಸಂಕಲ್ಪಕ್ಕೆ ಪೂರಕವಾಗಿದೆ ಎಂದು ಹೇಳಿದರು.

ABOUT THE AUTHOR

...view details