ಮಾಗಡಿ(ರಾಮನಗರ): ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದ ವೇದಿಕೆಯಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರ ಬೆಂಬಲಕ್ಕೆ ಡಿ.ಕೆ.ಸುರೇಶ್ ನಿಂತಿದ್ದು ಕುತೂಹಲಕ್ಕೆ ಕಾರಣವಾಯಿತು.
ಸಚಿವ ಅಶ್ವತ್ಥ್ ನಾರಾಯಣ ಭಾಷಣಕ್ಕೆ ಅಡ್ಡಿಪಡಿಸಿದ ಅಭಿಮಾನಿಗಳ ಗದರಿದ ಡಿ.ಕೆ.ಸುರೇಶ್
ಮಾಗಡಿಯಲ್ಲಿ ಸಚಿವ ಅಶ್ವತ್ಥ್ ನಾರಾಯಣ ಭಾಷಣದ ವೇಳೆ 'ಡಿಕೆ ಡಿಕೆ ಡಿಕೆ' ಎಂದು ಘೋಷಣೆಗಳನ್ನು ಕೂಗುತ್ತಿದ್ದ ಅಭಿಮಾನಿಗಳನ್ನು ಗದರಿದ ಸಂಸದ ಡಿ.ಕೆ.ಸುರೇಶ್ ಹೊರ ಹೋಗುವಂತೆ ಸೂಚಿಸಿದ ಪ್ರಸಂಗವೂ ನಡೆಯಿತು.
ಅಲ್ಲಿ ಗರಂ.. ಇಲ್ಲಿ ಬೆಂಬಲ; ಸಚಿವ ಅಶ್ವತ್ಥ ನಾರಾಯಣ ಭಾಷಣಕ್ಕೆ ಅಡ್ಡಿ ಪಡಿಸಿದ ಅಭಿಮಾನಿಗಳಿಗೆ ಡಿಕೆ ಸುರೇಶ್ ವಾರ್ನಿಂಗ್
ಮಾಗಡಿಯಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಭಾಷಣ ಪ್ರಾರಂಭ ಮಾಡುತ್ತಿದ್ದಂತೆ 'ಡಿಕೆ... ಡಿಕೆ... ಡಿಕೆ..' ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದರು. ಈ ವೇಳೆ ಸಚಿವರು ಭಾಷಣ ಮಾಡುತ್ತಿದ್ದ ಡಯಾಸ್ ಬಳಿ ಬಂದ ಡಿ.ಕೆ.ಸುರೇಶ್, 'ಹೇಯ್.. ಗೌರವ ಕೊಡೋದು ಕಲ್ತ್ಕೊಳ್ಳಿ' ಎಂದು ತಮ್ಮ ಅಭಿಮಾನಿಗಳನ್ನು ಗದರಿದರು. ಇದೇ ವೇಳೆ ಬೆಂಬಲಿಗರನ್ನು ವೇದಿಕೆಯಿಂದ ಹೊರ ಹೋಗುವಂತೆ ತಾಕೀತು ಮಾಡಿದರು.
ಇದನ್ನೂ ಓದಿ:ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?