ರಾಯಚೂರು:ಕೋವಿಡ್ ಸಾಂಕ್ರಾಮಿಕ ರೋಗದಿಂದ ಇಡೀ ರಾಜ್ಯವೇ ಆತಂಕದಲ್ಲಿದೆ. ಇದರ ನಡುವೆ ಮಳೆಗಾಲ ಶುರುವಾಗಿದೆ. ಸಹಜವಾಗಿಯೇ ಡೆಂಗ್ಯೂ, ಮಲೇರಿಯಾ ಸೇರಿದಂತೆ ನಾನಾ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಜನರನ್ನು ಆವರಿಸಿದೆ.
ನಗರದಲ್ಲಿ ಚರಂಡಿ ಸ್ವಚ್ಛಗೊಳಿಸದೆ ಇರುವುದು ಹಾಗೂ ರಸ್ತೆಗಳ ಮೇಲೆ ಮಳೆ ನೀರು ನಿಲುಗಡೆಯಿಂದ ಸೂಳ್ಳೆಗಳು ಉತ್ತತ್ಪಿಯಾಗುತ್ತಿದ್ದು ಜನರ ಆತಂಕವನ್ನು ಹೆಚ್ಚಿಸುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರವೇಶವಾಗುವ ಮುನ್ನ ಅಕಾಲಿಕ ಮಳೆ ಸುರಿದಿತ್ತು. ಹೀಗಾಗಿ ಚರಂಡಿಯಲ್ಲಿರುವ ಕೊಚ್ಚೆ, ಕೊಳಚೆ ನೀರು ರಸ್ತೆ ಮೇಲೆ ಬಂದಿದೆ. ಮನೆಗಳಿಗೂ ಚರಂಡಿ ನೀರು ನುಗ್ಗಿದ್ದವು. ನಗರ, ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳ ರಸ್ತೆಗಳ ಮೇಲೆ, ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಮಳೆ ನೀರು ನಿಂತಿರುವ ದೃಶ್ಯಗಳು ಕಾಣಸಿಗುತ್ತಿವೆ. ಹೀಗೆ ಮಳೆ ನೀರು ನಿಂತಿರುವ ಸ್ಥಳದಲ್ಲಿ ಸೂಳ್ಳೆಗಳ ಜನನವಾಗುತ್ತಿದೆ.