ಕರ್ನಾಟಕ

karnataka

ETV Bharat / state

ನಾಳೆ ರಾಯಚೂರಿಗೆ ಸಿಎಂ: ಏನೂ ಇಲ್ಲದಿದ್ದ ಶಾಲೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲ ಫೆಸಿಲಿಟಿ

ಸಿಎಂ ವಾಸ್ತವ್ಯ ಹೂಡಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು, ಸುಂದರವಾದ ಚಿತ್ರಗಳನ್ನು ಚಿತ್ರಿಸುವ ಮೂಲಕ ಅಚ್ಚುಕಟ್ಟು ಮಾಡಲಾಗಿದೆ. ಆದರೆ ಈ ಶಾಲೆಯಲ್ಲಿ ಮೊದಲು ಇಷ್ಟೊಂದು ಸೌರ್ಕರ್ಯ ಇರಲಿಲ್ಲ.

By

Published : Jun 25, 2019, 5:22 PM IST

Updated : Jun 25, 2019, 7:05 PM IST

CM

ರಾಯಚೂರು: ಜಿಲ್ಲೆಗೆ ನಾಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

ಸಿಎಂ ವಾಸ್ತವ್ಯ ಹೂಡಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು, ಸುಂದರವಾದ ಚಿತ್ರಗಳನ್ನು ಚಿತ್ರಿಸುವ ಮೂಲಕ ಅಚ್ಚುಕಟ್ಟು ಮಾಡಲಾಗಿದೆ. ಆದರೆ ಈ ಶಾಲೆಯಲ್ಲಿ ಮೊದಲು ಇಷ್ಟೊಂದು ಸೌರ್ಕರ್ಯ ಇರಲಿಲ್ಲ.

ಸಿಎಂ ವಾಸ್ತವ್ಯ ಹೂಡುವ ಶಾಲೆ

1ರಿಂದ 7ನೇ ತರಗತಿವರೆಗಿನ ವಿದ್ಯಾಭ್ಯಾಸಕ್ಕೆ ಅವಕಾಶವಿರುವ ಶಾಲೆಯಲ್ಲಿ 147 ವಿದ್ಯಾರ್ಥಿಗಳಿದ್ದಾರೆ. 3 ಕಾಯಂ ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಈ ಮೊದಲು ಶಾಲೆಗೆ ಹೇಳಿಕೊಳ್ಳುವಂತೆ ಮೂಲಭೂತ ಸೌಕರ್ಯಗಳು ಇರಲಿಲ್ಲ.

ನಾಳೆ ಸಿಎಂ ಆಗಮಿಸುತ್ತಿರುವ ಹಿನ್ನೆಲೆ ಶಾಲೆಗೆ ಪ್ರತ್ಯೇಕ ಶೌಚಾಲಯ, ಸ್ನಾನದ ಕೋಣೆ ನಿರ್ಮಿಸಲಾಗಿದೆ. ರಾತ್ರಿ ಮಲಗುವ ಕೋಣೆಯಲ್ಲಿ ಲೈಟ್‌, ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಆಟ ಮೈದಾನ, ಕಾಂಪೌಂಡ್​ ನಿರ್ಮಿಸಲಾಗಿದೆ. ಶಾಲೆಗೆ ಅಂದ ಹೆಚ್ಚಿಸಲು ಭಿತ್ತಿ ಚಿತ್ರಗಳನ್ನು ಕೂಡ ಬಿಡಿಸಲಾಗಿದೆ.

Last Updated : Jun 25, 2019, 7:05 PM IST

ABOUT THE AUTHOR

...view details