ಕರ್ನಾಟಕ

karnataka

By

Published : Nov 17, 2020, 10:29 PM IST

ETV Bharat / state

ಖಾಲಿ ಪೈಪ್​​ನಲ್ಲಿ ಸಿಲುಕಿಕೊಂಡಿರುವ ಚಿರತೆ: ಸೆರೆ ಹಿಡಿಯದ ಅರಣ್ಯ ಇಲಾಖೆ

ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಹಳೇ ರಾಮನಹಳ್ಳಿ ಗ್ರಾಮದಲ್ಲಿ ಸೋಮವಾರ ಖಾಲಿ ಪೈಪ್​ವೊಂದರಲ್ಲಿ ಚಿರತೆ ಸಿಲುಕಿಕೊಂಡಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದ್ರೂ ಇದೂವರೆಗೂ ಅರಣ್ಯಾಧಿಕಾರಿಗಳು ಮಾತ್ರ ಹತ್ತಿರ ಸುಳಿದಿಲ್ಲ. ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಲಿ ಪೈಪ್​​ನಲ್ಲಿ ಚಿರತೆ
ಖಾಲಿ ಪೈಪ್​​ನಲ್ಲಿ ಚಿರತೆ

ಮೈಸೂರು:ಖಾಲಿ ಪೈಪ್​ನಲ್ಲಿ ಸಿಲುಕಿಕೊಂಡಿರುವ ಚಿರತೆಯನ್ನು ರಕ್ಷಿಸಲು ಅರಣ್ಯಾಧಿಕಾರಿಗಳು ಆಗಮಿಸುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಹಳೇಳೆ ರಾಮನಹಳ್ಳಿ ಗ್ರಾಮದಲ್ಲಿ ಸೋಮವಾರ ನಾಯಿ ತಿಂದು‌ ಖಾಲಿ ಪೈಪ್ ಒಳಗೆ‌ ಚಿರತೆ ನುಗ್ಗಿತ್ತು. ಚಿರತೆಯನ್ನು ನೋಡಿದ ಗ್ರಾಮಸ್ಥರು, ಪೈಪ್​ನ ಎರಡೂ ಕಡೆ ಬಂದ್ ಮಾಡಿ ಚಿರತೆ ಇರುವ ವಿಷಯವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.

ಖಾಲಿ ಪೈಪ್​​ನಲ್ಲಿ ಸಿಲುಕಿಕೊಂಡಿರುವ ಚಿರತೆ

ಸೋಮವಾರದಿಂದಲೂ ನೀರಿನ ಖಾಲಿ ಪೈಪ್​ನಲ್ಲೇ ಬಂಧಿಯಾಗಿರುವ ಚಿರತೆಯನ್ನು ರಕ್ಷಣೆ ಮಾಡಿ, ಕಾಡಿಗೆ ಬಿಡುವಂತೆ ಗ್ರಾಮಸ್ಥರು ಮನವಿ ಮಾಡಿದ್ರು‌‌. ಆದ್ರೆ ಅರಣ್ಯಾಧಿಕಾರಿಗಳು ಮಾತ್ರ ಹತ್ತಿರ ಸುಳಿದಿರಲಿಲ್ಲ. ಖಾಲಿ ಪೈಪ್​​ನಿಂದ ಹೊರ ಬರಲು ಚಿರತೆ ಯತ್ನಿಸಿದೆ. ಆದರೆ ಚಿರತೆ ಹೊರ ಬಂದು ಓಡಿ ಹೋದರೆ ನಮ್ಮ ಜಾನುವಾರುಗಳು ಮತ್ತೆ ಅದಕ್ಕೆ ಆಹಾರವಾಗುತ್ತವೆ ಎಂಬ ಆತಂಕ ಗ್ರಾಮಸ್ಥರದ್ದಾಗಿದೆ.

ABOUT THE AUTHOR

...view details