ಕರ್ನಾಟಕ

karnataka

By

Published : Jun 9, 2019, 4:12 AM IST

ETV Bharat / state

ಸುಸಜ್ಜಿತ ಆಸ್ಪತ್ರೆಗಾಗಿ ಕೊಡವರ ಟ್ವೀಟ್​ ಅಭಿಯಾನ... ಸ್ಪಂದಿಸ್ತಾರಾ ಸಿಎಂ?

ಕೊಡಗು ಜಿಲ್ಲೆಗೂ ಸುಸಜ್ಜಿತ ಆಸ್ಪತ್ರೆಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುಮಾಡಿದ ಕೊಡವರು

ಎಚ್.ಡಿ.ಕುಮಾರಸ್ವಾಮಿ

ಮೈಸೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ಶುರುಮಾಡಿದ್ದ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಉಂಟಾದ ಬೆನ್ನಲ್ಲೇ, ಕೊಡಗು ಜಿಲ್ಲೆಯಲ್ಲೂ ಆಸ್ಪತ್ರೆಗಾಗಿ ಅಭಿಯಾನ ಶುರುವಿಟ್ಟಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ‘ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆಯ ಅಗತ್ಯಕ್ಕಾಗಿ ಅಭಿಯಾನ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವರದಿ ತರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

ಇದಕ್ಕೆ ರೀಟ್ವೀಟ್ ಮಾಡಿರುವ ಟ್ವೀಟ್ಟಿಗರು ತಮ್ಮ ಜಿಲ್ಲೆಗೂ ಸುಸಜ್ಜಿತ ಆಸ್ಪತ್ರೆ ನೀಡುವಂತೆ ಕೇಳಿಕೊಳ್ಳುತ್ತಿರುವ ಬೆನ್ನಲೇ, ಕೊಡಗಿನ ಬ್ರಾಗಿನ್ ಬೋಪಣ್ಣ ಎನ್ನುವವವರು ತಮ್ಮ ಟ್ವೀಟರ್ ಖಾತೆಯಲ್ಲಿ ‘ಮುಖ್ಯಮಂತ್ರಿಗಳೇ ನಿಮ್ಮ ತಕ್ಷಣದ ಪ್ರತಿಕ್ರಿಯೆ ಸ್ವಾಗತಾರ್ಹ.

ಹಾಗೆನೇ ಕೊಡಗು ಜಿಲ್ಲೆಗೂ ಕೂಡ ತುರ್ತು ಚಿಕಿತ್ಸೆಗೆ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ಚಿಕಿತ್ಸೆಗಾಗಿ ಮಂಗಳೂರು, ಮೈಸೂರಿಗೆ ಓಡುವ ಪರಿಸ್ಥಿತಿ ಇದೆ ಹಾಗಾಗಿ ಕೊಡಗು ಜಿಲ್ಲೆಯ ಬಗೆಗೂ ಸ್ವಲ್ಪ ಗಮನ ಕೊಡಿ, ನಮ್ಮ ಜಿಲ್ಲೆಯನ್ನು ನಿರ್ಲಕ್ಷಿಸಬೇಡಿ ಎಂದು ಟ್ವೀಟ್ ಮಾಡಿದ್ದು ಭಾರಿ ಸಂಚಲನ ಉಂಟು ಮಾಡಿದೆ. ಕೊಡವರಿಗೆ ಆಸ್ಪತ್ರೆ ಭಾಗ್ಯವನ್ನು ಸಿಎಂ ಕರುಣಿಸುತ್ತಾರಾ ಎಂದು ಕಾದು ನೋಡಬೇಕಿದೆ.

For All Latest Updates

TAGGED:

ABOUT THE AUTHOR

...view details