ಮೈಸೂರು:ವಿದೇಶದಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮಾತನಾಡಿ, ನನ್ನ ಧ್ವನಿ ಸರಿಯಾಗಲು ಇನ್ನೂ 2-3 ತಿಂಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.
ನವೆಂಬರ್ 18ರ ರಾತ್ರಿ ವ್ಯಕ್ತಿಯೊಬ್ಬರಿಂದ ಹಲ್ಲೆಗೊಳಗಾಗಿದ್ದರು. ಇಂದು ಮೈಸೂರು ಜೈಲಿಗೆ ಹಲ್ಲೆ ಮಾಡಿದವರ ಗುರುತು ಹಿಡಿಯಲು ಆಗಮಿಸಿದ ನಂತರ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತಾನಾಡಿ ಧ್ವನಿ ಸರಿಯಾಗಲು ಇನ್ನೂ 2-3 ತಿಂಗಳು ಬೇಕಾಗುತ್ತದೆ. ಎಲ್ಲ ಚಿಕಿತ್ಸೆ ತೆಗೆದುಕೊಂಡಿದ್ದೇನೆ. ಆಸ್ಪತ್ರೆಗೆ ಆರೋಗ್ಯ ವಿಚಾರಿಸಲು ಆಗಮಿಸಿದ ಎಲ್ಲಾರಿಗೂ ಧನ್ಯವಾದ ಎಂದ್ರು.
10 ದಿನಗಳ ಕಾಲ ಚಿಕಿತ್ಸೆ ಪಡೆದು, ವ್ಯಾಯಾಮ ಸಹ ಮಾಡಿದ್ದೇನೆ ಎಂದು ಸಣ್ಣಗೆ ತೊದಲುತ್ತಾ ಹೇಳಿದರು. ಜೈಲಿನಲ್ಲಿರುವ ಆರೋಪಿಗಳನ್ನು ಗುರುತು ಹಿಡಿಯುವುದು ಕಷ್ಟ ಆಗಲಿಲ್ಲ. ಆವರನ್ನು ಗುರುತಿಸಿದ್ದೇನೆ. ಅವತ್ತು ನನಗೆ ಈ ರೀತಿ ಹಲ್ಲೆಯಾಗುತ್ತದೆ ಎಂದು ಗೊತ್ತಿರಲಿಲ್ಲ. ಆದ್ರೆ ಹಲ್ಲೆಯಾಗಿದೆ ಎಂದು ಸಣ್ಣ ಧ್ವನಿಯಲ್ಲಿ ಹೇಳಿದ್ರು.