ಕರ್ನಾಟಕ

karnataka

By

Published : Dec 22, 2020, 7:25 PM IST

ETV Bharat / state

ಮೈಸೂರಿನ ದೇವರಾಜ ಮಾರುಕಟ್ಟೆ ನೆಲಸಮಗೊಳಿಸದಂತೆ ಹೈಕೋರ್ಟ್​ನಿಂದ ತಡೆಯಾಜ್ಞೆ

ಪಾರಂಪರಿಕ ದೇವರಾಜ ಮಾರುಕಟ್ಟೆ ಹಾಗೂ ಲ್ಯಾಂಡ್ಸ್ ಸ್ಟಾನ್ ಬಿಲ್ಡಿಂಗ್ ನೆಲಸಮ‌ಗೊಳಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

Devaraja market
ದೇವರಾಜ ಮಾರುಕಟ್ಟೆ

ಮೈಸೂರು:ಸಾಂಸ್ಕೃತಿಕ ನಗರಿಯ ಹೃದಯ ಭಾಗದಲ್ಲಿರುವ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾಂಡ್ಸ್ ಸ್ಟಾನ್ ಬಿಲ್ಡಿಂಗ್ ನೆಲಸಮಗೊಳಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಈ ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಮೈಸೂರು ಮಹಾನಗರ ಪಾಲಿಕೆ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿ ಹಿರಿಯ ನಾಗರಿಕರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿ, ವಾದ ವಿವಾದಗಳನ್ನು ಆಲಿಸಿದ ಹೈಕೋರ್ಟ್, ದೇವರಾಜ ಮಾರುಕಟ್ಟೆ ನೆಲಸಮಗೊಳಿಸದಂತೆ ತಡೆಯಾಜ್ಞೆ ನೀಡಿದ್ದು, ಇದು ವ್ಯಾಪಾರಸ್ಥರಿಗೆ ನೆಮ್ಮದಿ ತಂದಿದೆ.

ಓದಿ...ಜನವರಿ 9ಕ್ಕೆ ರೈಲ್‌ ಬಂದ್‌ ಚಳವಳಿ ಮಾಡುತ್ತೇವೆ: ವಾಟಾಳ್ ಘೋಷಣೆ

ABOUT THE AUTHOR

...view details