ಕರ್ನಾಟಕ

karnataka

ETV Bharat / state

ತಾಯಂದಿರ ಪಾದ ಪೂಜಿಸಿ ಗುರು ಪೂರ್ಣಿಮೆ ಆಚರಣೆ

ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ಮೈಸೂರಿನ ಶ್ರೀ ಅರ್ಜುನ ಅವದೂತರು ಮಾತೆಯರ ಪಾದ ಪೂಜೆ ಮಾಡಿದರು.

By

Published : Jul 16, 2019, 2:02 PM IST

ತಾಯಂದಿರ ಪೂಜೆ ಮಾಡಿ ಗುರು ಪೂರ್ಣಿಮೆ ಆಚರಣೆ

ಮೈಸೂರು: ಇಂದು ದೇಶಾದ್ಯಂತ ಗುರು ಪೂರ್ಣಿಮೆಯ ಸಂಭ್ರಮ. ಈ ಹಿನ್ನೆಲೆಯಲ್ಲಿ ಮೈಸೂರಿನಶ್ರೀ ಅರ್ಜುನ ಅವದೂತರು ಸ್ವಾಮೀಜಿ ತಾಯಂದಿರ ಪಾದ ಪೂಜೆ ಮಾಡಿ ವಿಶಿಷ್ಟವಾಗಿ ಗುರು ಪೂರ್ಣಿಮಾ ಆಚರಿಸಿದ್ರು.

ಈ ದಿನ ಗುರುವನ್ನು ನೆನೆದು ಅವರನ್ನು ಸ್ಮರಿಸುವ ದಿನವೇ ಗುರು ಪೂರ್ಣಿಮೆಯಾಗಿದ್ದು, ಇಂದೇ ಚಂದ್ರ ಗ್ರಹಣ ಸಹ ಇರುವುದು ಮತ್ತೊಂದು ವಿಶೇಷವಾಗಿದೆ. ಹಾಗಾಗಿ ನಗರದ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ನ ಗುರೂಜಿ ಶ್ರೀ ಅರ್ಜುನ ಅವದೂತರು ತಮ್ಮ ಗುರುವಿನ ನೆನಪಿಗಾಗಿ ಮಾತೆಯರ ಪಾದ ಪೂಜೆ ನೆರವೇರಿಸಿದರು.

ತಾಯಂದಿರ ಪೂಜೆ ಮಾಡಿ ಗುರು ಪೂರ್ಣಿಮೆ ಆಚರಣೆ

ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಉತ್ತಮ ಮಳೆ ಆಗಲಿ, ರಾಜ್ಯ ಸುಭೀಕ್ಷವಾಗಿರಲಿ ಎಂದು ವಿಶೇಷ ಹೋಮ ಹವನಗಳನ್ನು ನೇರವೇರಿಸಲಾಗುತ್ತಿದೆ ಎಂದು ತಿಳಿಸಿದ್ರು.

ABOUT THE AUTHOR

...view details