ಮೈಸೂರು:ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್ ಇಂದು ಎಚ್.ವಿಶ್ವನಾಥ್ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಸಚಿವರಿಗೆ ಗ್ರಾಮಸ್ಥರು ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹುಣಸೂರಿನ ಮಲ್ಲಯ್ಯ ಗೌಡನಕೊಪ್ಪಲಿನಲ್ಲಿ ನಡೆದಿದೆ.
ಮಾಜಿ ಎಂಪಿ ವಿಜಯ್ ಶಂಕರ್ಗೆ ಅಡ್ಡಿ ಪಡಿಸಿದ ಗೌಡನಕೊಪ್ಪಲಿ ಗ್ರಾಮಸ್ಥರು: ವಿಡಿಯೋ
ಇಂದು ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್ ಇಂದು ಎಚ್.ವಿಶ್ವನಾಥ್ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಸಚಿವರಿಗೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದು, ಪ್ರಚಾರ ಮಾಡದೆ ಸಚಿವರು ವಾಪಾಸ್ ಹೋಗುವಂತೆ ಮಾಡಿರುವ ಘಟನೆ ಹುಣಸೂರಿನ ಮಲ್ಲಯ್ಯ ಗೌಡನಕೊಪ್ಪಲಿನಲ್ಲಿ ನಡೆದಿದೆ.
ಹುಣಸೂರು ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಚುನಾವಣಾ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಇಂದು ಎಚ್.ವಿಶ್ವನಾಥ್ ಪರ ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್ ಹುಣಸೂರಿನ ಮಲ್ಲಯ್ಯ ಗೌಡನಕೊಪ್ಪಲಿನಲ್ಲಿ ಪ್ರಚಾರ ಕೈಗೊಂಡಿದ್ದರು. ಈ ವೇಳೆ, ಶಂಕರ್ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದು ಗ್ರಾನಸ್ಥರಲ್ಲಿ ಕೇಳಿಕೊಂಡರು.
ಈ ವೇಳೆ, ಗ್ರಾಮಸ್ಥರು ವಿಜಯ್ ಶಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚುನಾವಣೆ ಪ್ರಚಾರ ಮಾಡದಂತೆ ಅಡ್ಡಿ ಪಡಿಸಿದರು. ಗ್ರಾಮಸ್ಥರ ಆಕ್ರೋಶದಿಂದ ಸಿ.ಎಚ್.ವಿಜಯ್ ಶಂಕರ್ ಚುನಾವಣೆ ಪ್ರಚಾರ ಮಾಡದೇ ವಾಪಸ್ ಹೋದರು.