ಕರ್ನಾಟಕ

karnataka

By

Published : Dec 2, 2019, 2:24 PM IST

ETV Bharat / state

ಮಾಜಿ ಎಂಪಿ ವಿಜಯ್ ಶಂಕರ್​ಗೆ ಅಡ್ಡಿ ಪಡಿಸಿದ ಗೌಡನಕೊಪ್ಪಲಿ ಗ್ರಾಮಸ್ಥರು: ವಿಡಿಯೋ

ಇಂದು ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್​ ಇಂದು ಎಚ್.ವಿಶ್ವನಾಥ್ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಸಚಿವರಿಗೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದು, ಪ್ರಚಾರ ಮಾಡದೆ ಸಚಿವರು ವಾಪಾಸ್​ ಹೋಗುವಂತೆ ಮಾಡಿರುವ ಘಟನೆ ಹುಣಸೂರಿನ ಮಲ್ಲಯ್ಯ ಗೌಡನಕೊಪ್ಪಲಿನಲ್ಲಿ ನಡೆದಿದೆ.

ವಿಜಯ್ ಶಂಕರ್
Former MLA Vijay Shankar

ಮೈಸೂರು:ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್​ ಇಂದು ಎಚ್.ವಿಶ್ವನಾಥ್ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಸಚಿವರಿಗೆ ಗ್ರಾಮಸ್ಥರು ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹುಣಸೂರಿನ ಮಲ್ಲಯ್ಯ ಗೌಡನಕೊಪ್ಪಲಿನಲ್ಲಿ ನಡೆದಿದೆ.

ಪ್ರಚಾರ ವೇಳೆ ವಿಜಯ್ ಶಂಕರ್​ಗೆ ಅಡ್ಡಿ ಪಡಿಸಿದ ಗೌಡನಕೊಪ್ಪಲಿ ಗ್ರಾಮಸ್ಥರು

ಹುಣಸೂರು ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಚುನಾವಣಾ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಇಂದು ಎಚ್.ವಿಶ್ವನಾಥ್ ಪರ ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್​ ಹುಣಸೂರಿನ ಮಲ್ಲಯ್ಯ ಗೌಡನಕೊಪ್ಪಲಿನಲ್ಲಿ ಪ್ರಚಾರ ಕೈಗೊಂಡಿದ್ದರು. ಈ ವೇಳೆ, ಶಂಕರ್ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದು ಗ್ರಾನಸ್ಥರಲ್ಲಿ ಕೇಳಿಕೊಂಡರು.

ಈ ವೇಳೆ, ಗ್ರಾಮಸ್ಥರು ವಿಜಯ್ ಶಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚುನಾವಣೆ ಪ್ರಚಾರ ಮಾಡದಂತೆ ಅಡ್ಡಿ ಪಡಿಸಿದರು. ಗ್ರಾಮಸ್ಥರ ಆಕ್ರೋಶದಿಂದ ಸಿ.ಎಚ್.ವಿಜಯ್ ಶಂಕರ್ ಚುನಾವಣೆ ಪ್ರಚಾರ ಮಾಡದೇ ವಾಪಸ್ ಹೋದರು.

ABOUT THE AUTHOR

...view details