ಮೈಸೂರು: ಕೊರೊನಾ ಸೋಂಕಿಗೆ ಹೆದರಿ ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿ. ನರಸೀಪುರ ರಸ್ತೆಯಲ್ಲಿರುವ ವರುಣಾ ಗ್ರಾಮದಲ್ಲಿ ನಡೆದಿದೆ.
ಸಿದ್ದಾರ್ಥ ಲೇಔಟ್ನಲ್ಲಿ ವಾಸವಾಗಿದ್ದ ಶಿವನಂಜೇಗೌಡ (65) ಕೆರೆಗೆ ಹಾರಿದ ವ್ಯಕ್ತಿ. ಇವರು ಮೂಲತಃ ತಿ. ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಗೊರವನಹಳ್ಳಿ ನಿವಾಸಿಯಾಗಿದ್ದು, 4 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿ ಹೋಮ್ ಐಸೋಲೇಶನ್ನಲ್ಲಿದ್ದರು. ನಂತರ ವೈರಸ್ ಕುರಿತು ಭಯಭೀತರಾಗಿ ವರುಣಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.