ಕರ್ನಾಟಕ

karnataka

ETV Bharat / state

ಸಿಎಂ ಪಟ್ಟ ಸಿಗಲೆಂದು ಯಡಿಯೂರಪ್ಪ ತವರಿನಲ್ಲಿ ಪೂಜೆ-ಹೋಮ

ಬಿ.ಎಸ್ ಯಡಿಯೂರಪ್ಪ ಸಿಎಂ ಆಗಲಿ ಎಂದು ಬಿಎಸ್​ವೈ ಸಹೊದರಿ ಸೇರಿ ಅಭಿಮಾನಿಗಳು ದೇವಸ್ಥಾನದಲ್ಲಿ ವಿಶೇಷ ಹೋಮ-ಹವನ ನಡೆಸಿದ್ರು.

By

Published : Jul 16, 2019, 11:50 AM IST

ಸಿಎಂ ಪಟ್ಟ ಸಿಗಲೆಂದು ಯಡಿಯೂರಪ್ಪ ತವರಿನಲ್ಲಿ ಪೂಜೆ-ಹೋಮ

ಮಂಡ್ಯ:ರಾಜ್ಯದಲ್ಲಿ ಅಧಿಕಾರದ ಗದ್ದುಗೆಗಾಗಿ ಹೋರಾಟ ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಸರ್ಕಸ್ ಮಾಡುತ್ತಿದ್ದರೆ, ಇತ್ತ ಯಡಿಯೂರಪ್ಪ ಸಿಎಂ ಗದ್ದುಗೆ ಸಿಗುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಯಡಿಯೂರಪ್ಪ ತವರು ಗ್ರಾಮದಲ್ಲಿ ಮನೆ ದೇವರ ಮೊರೆ ಹೋಗಿದ್ದಾರೆ ಗ್ರಾಮಸ್ಥರು.

ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಯಡಿಯೂರಪ್ಪ ಸಹೋದರಿ ಪ್ರೇಮ ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಕುಲದೇವರಾದ ಗೋಗಾಲಮ್ಮ ತಾಯಿಗೆ ಇಂದು ವಿಶೇಷ ಪೂಜೆ ಸಲ್ಲಿಸಿದ್ರು. ಗ್ರಾಮ ದೇವತೆ ಸನ್ನಿಧಿಯಲ್ಲಿ ಗಣಪತಿ ಹೋಮ, ಸುದರ್ಶನ ಹೋಮ, ಶತ್ರು ಸಂಹಾರ ಯಾಗ ಸೇರಿದಂತೆ ವಿವಿಧ ಹೋಮ ಹವನಗಳನ್ನು ಮಾಡುವ ಮೂಲಕ ಮತ್ತೆ ಬಿಎಸ್ವೈ ಸಿ.ಎಂ. ಆಗಲೆಂದು ಪ್ರಾರ್ಥನೆ ಸಲ್ಲಿಸಿದರು.

ಸಿಎಂ ಪಟ್ಟ ಸಿಗಲೆಂದು ಯಡಿಯೂರಪ್ಪ ತವರಿನಲ್ಲಿ ಪೂಜೆ-ಹೋಮ

ಈ ವೇಳೆ ಮಾತನಾಡಿದ ಯಡಿಯೂರಪ್ಪ ಸಹೋದರಿ ಪ್ರೇಮ, ಅಣ್ಣನ ಒಳಿತು ಮತ್ತು ಅಧಿಕಾರ ಪ್ರಾಪ್ತಿಗೆ ಮನೆ ದೇವರಿಗೆ ಪೂಜೆ ಸಲ್ಲಿಸಿರೋದಾಗಿ ತಿಳಿಸಿದರು. ಯಡಿಯೂರಪ್ಪ ಅಭಿಯಾನಿ ಮಧು ಎಂಬ ಗ್ರಾಮಸ್ಥ ಯಡಿಯೂರಪ್ಪಗೆ ಈ ಬಾರಿ ಮತ್ತೆ ಅಧಿಕಾರ ಪ್ರಾಪ್ತಿಯಾಗಲು ಪೂಜೆ, ಹೋಮ ಮಾಡಿಸುತ್ತಿರುವುದಾಗಿ ತಿಳಿಸಿದರು.

ABOUT THE AUTHOR

...view details