ಕರ್ನಾಟಕ

karnataka

By

Published : Jan 30, 2021, 7:20 AM IST

ETV Bharat / state

ಬಾಲನ್ಯಾಯ ಮಂಡಳಿಗೆ ಜಿಲ್ಲಾಧಿಕಾರಿ ಭೇಟಿ: ಮೂಲಸೌಕರ್ಯಗಳ ಕುರಿತು ಪರಿಶೀಲನೆ

ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರು ಜಿಲ್ಲೆಯಲ್ಲಿರುವ ಬಾಲನ್ಯಾಯ ಮಂಡಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.

ಬಾಲನ್ಯಾಯ ಮಂಡಳಿ
Balanayaya Board

ಮಂಡ್ಯ:ಜಿಲ್ಲೆಯಲ್ಲಿರುವ ಬಾಲನ್ಯಾಯ ಮಂಡಳಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.

ಮಕ್ಕಳ ಆರೋಗ್ಯ, ಬಟ್ಟೆ, ಊಟ ಮತ್ತು ಶಿಕ್ಷಣ ಇನ್ನಿತರ ಕುಂದುಕೊರತೆಗಳ ಬಗ್ಗೆ ಆಲಿಸಿದ ಜಿಲ್ಲಾಧಿಕಾರಿಗಳು, ಸರ್ಕಾರದಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಸಿಗುತ್ತಿವೆಯೇ ಎಂಬುದರ ಕುರಿತಂತೆ ಮಾಹಿತಿ ಪಡೆದರು. ‌‌‌

ನೀವು ಪಾಠ ಪ್ರವಚನಗಳ ಜೊತೆಗೆ ಇನ್ನಿತರ ಕ್ರೀಡೆ, ಸಾಹಿತ್ಯ-ಸಂಗೀತ, ಯೋಗ ಇನ್ನಿತರ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದರು.

ಮಕ್ಕಳಿಗೆ ಉತ್ತಮ ಗುಣಮಟ್ಟದ ಊಟ, ತಿಂಡಿಗಳನ್ನು ನೀಡಬೇಕು. ಮಕ್ಕಳನ್ನು ಸುರಕ್ಷಿತವಾಗಿ ಒಂದು ದಿನದ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಬರಲು ಮೇಲ್ವಿಚಾರಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ABOUT THE AUTHOR

...view details