ಕರ್ನಾಟಕ

karnataka

ETV Bharat / state

ಹುತಾತ್ಮ ಯೋಧನ ಕುಟುಂಬಕ್ಕೆ ಸಚಿವ ತಮ್ಮಣ್ಣ ಸಾಂತ್ವನ

ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಶೀಘ್ರವಾಗಿ ತರಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸಚಿವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

By

Published : Feb 15, 2019, 10:27 AM IST

ಯೋಧ ಗುರು ತಂದೆ

ಮಂಡ್ಯ:ಭಯೋತ್ಪಾದಕರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮನಾದ ಗುರು ಕುಟುಂಬಕ್ಕೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ದೂರವಾಣಿ ಮೂಲಕ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ತಮ್ಮ ಬೆಂಬಲಿಗನ ಮೊಬೈಲ್‌ಗೆ ಕರೆ ಮಾಡಿದ್ದ ಸಚಿವರು, ಯೋಧನ ಕುಟುಂಬದ ಜೊತೆ ಸರ್ಕಾರ ಇರುವುದಾಗಿ ಭರವಸೆ ನೀಡಿದ್ದಾರೆ‌. ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಶೀಘ್ರವಾಗಿ ತರಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಯೋಧ ಗುರು ತಂದೆ

ಇನ್ನು ಗುರುವಿನ ತಂದೆ ಹೊನ್ನಯ್ಯ ಅವರೊಂದಿಗೆ ಸಚಿವ ತಮ್ಮಣ್ಣ ಮಾತನಾಡಿ, ಸಾಂತ್ವನ ಹೇಳಿದ್ರು.

ABOUT THE AUTHOR

...view details