ಪುಟ್ಟಲಿಂಗಮ್ಮ ಎಂಬುವವರು ಎರಡು ಎಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಇವರ ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ ಗಿಡಗಳನ್ನೆಲ್ಲಾ ತುಳಿದು ನಾಶ ಮಾಡಿವೆ. ಇದರಿಂದ ಸುಮಾರು 1.50 ಲಕ್ಷ ರೂಪಾಯಿ ನಷ್ಟ ಉಂಟಾಗಿದ್ದು, ರೈತ ಮಹಿಳೆ ಪುಟ್ಟಲಿಂಗಮ್ಮ ಸಾಲ ಮಾಡಿ ಬೆಳೆ ಬೆಳೆದಿದ್ದರು. ಆನೆ ದಾಳಿಯಿಂದಾಗಿ ಇವರೀಗ ಸಂಕಷ್ಟಕ್ಕೀಡಾಗಿದ್ದಾರೆ.
ಬಾಳೆ ತೋಟವನ್ನೇ ತುಳಿದು ನಾಶ ಮಾಡಿದ ಕಾಡಾನೆ... ಸಂಕಷ್ಟದಲ್ಲಿ ರೈತ ಮಹಿಳೆ
ಮಂಡ್ಯ: ಕಾಡಾನೆ ದಾಳಿಯಿಂದ ಬಾಳೆ ತೋಟ ನಾಶವಾಗಿರುವ ಘಟನೆ ಮಳವಳ್ಳಿ ತಾಲೂಕಿನ ಮಂಚನಹಳ್ಳಿಯಲ್ಲಿ ನಡೆದಿದೆ.
ಬಾಳೆ ತೋಟ ನಾಶ ಮಾಡಿದ ಕಾಡಾನೆ
ಇನ್ನು ಮಳವಳ್ಳಿ ತಾಲೂಕಿನಲ್ಲಿ ಆನೆ ದಾಳಿಯಿಂದ ಬಹಳ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆನೆ ದಾಳಿ ತಡೆಗಟ್ಟಿ ಸೂಕ್ತ ಪರಿಹಾರ ನೀಡಲು ಪ್ರಮಾಣಿಕ ಕರ್ತವ್ಯ ನಿರ್ವಹಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.