ಕರ್ನಾಟಕ

karnataka

ನಿಮಿಷಾಂಭ ದೇವಿ ಮೊರೆ ಹೋದ ನಿರೂಪಕಿ ಅನುಶ್ರೀ

By

Published : Oct 2, 2020, 12:27 PM IST

ಸೆಪ್ಟೆಂಬರ್ 24-2020ರಂದು ಸ್ಯಾಂಡಲ್​​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣದಡಿ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರೂಪಕಿ-ನಟಿ ಅನುಶ್ರೀ ಇಂದು ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Anchor Anushri visited the Nimishamba Temple
ನಿಮಿಷಾಂಭ ದೇವಿ ಮೊರೆ ಹೋದ ನಿರೂಪಕಿ ಅನುಶ್ರೀ

ಮಂಡ್ಯ:ಸ್ಯಾಂಡಲ್​​ವುಡ್​​ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದ​​​ ಸಂಕಷ್ಟ ಎದುರಿಸುತ್ತಿರುವ ನಿರೂಪಕಿ-ನಟಿ ಅನುಶ್ರೀ ಶ್ರೀರಂಗಪಟ್ಟಣದ ನಿಮಿಷಾಂಭ ದೇವಿಯ ಮೊರೆ ಹೋಗಿದ್ದಾರೆ.

ನಿಮಿಷಾಂಭ ದೇಗುಲಕ್ಕೆ ಅನುಶ್ರೀ ಭೇಟಿ

ಸಿಸಿಬಿ ವಿಚಾರಣೆ ಬಳಿಕ ತಾನು ಅನುಭವಿಸುತ್ತಿರುವ ನೋವು ಹೊರಹಾಕಿದ ಅನುಶ್ರೀ

ಅನುಶ್ರೀ ಹಾಗೂ ಕುಟುಂಬಸ್ಥರು ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬೆಳಗ್ಗೆ ದೇವಿ ಸನ್ನಿಧಾನಕ್ಕೆ ಬಂದು ಹರಕೆ ಹೊತ್ತು ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಕಾವೇರಿ ನದಿಗೆ ತೆರಳಿ ಪೂಜೆ ಸಲ್ಲಿಸಿದರು. ಡ್ರಗ್ಸ್ ಆರೋಪ ಪ್ರಕರಣದಲ್ಲಿ ಇತ್ತೀಚೆಗೆ ವಿಚಾರಣೆ ಎದುರಿಸಿದ್ದ ಅನುಶ್ರೀ ದೇವಾಲಯಕ್ಕೆ ಭೇಟಿ ನೀಡಿದ್ದು ವಿಶೇಷವಾಗಿದೆ.

ABOUT THE AUTHOR

...view details