ಕರ್ನಾಟಕ

karnataka

By

Published : Apr 29, 2020, 4:42 PM IST

ETV Bharat / state

ಕೃಷ್ಣಗಿರಿ ಹೆದ್ದಾರಿಯ ಅಂಡರ್ ಪಾಸ್​​ನಲ್ಲಿ ಪಾದಚಾರಿಗಳಿಗೆ ನರಕಯಾತನೆ

ಕುಷ್ಟಗಿಯ ಕೃಷ್ಣಗಿರಿ ಕಾಲೋನಿ ಬಳಿ ರಾಷ್ಟ್ರೀಯ ಹೆದ್ದಾರಿಯ ಅಂಡರ್​ ಪಾಸ್​ನ ಪಾದಚಾರಿ ಮಾರ್ಗದಲ್ಲಿ ಮೇಲ್ಛಾವಣಿ ಇಲ್ಲದಿರವ ಹಿನ್ನೆಲೆ ಮಳೆ ನೀರು ಜಮೆಯಾಗಿ ರಸ್ತೆ ಗಬ್ಬೆದ್ದು ನಾರುತ್ತಿದೆ.

ಪಾದಚಾರಿಗಳಿಗೆ ನರಕ
ಪಾದಚಾರಿಗಳಿಗೆ ನರಕ

ಕುಷ್ಟಗಿ:ಇಲ್ಲಿನ ಕೃಷ್ಣಗಿರಿ ಕಾಲೋನಿ ಬಳಿ ರಾಷ್ಟ್ರೀಯ ಹೆದ್ದಾರಿಯ ಅಂಡರ್​ ಪಾಸ್​ನ ಪಾದಚಾರಿ ಮಾರ್ಗದಲ್ಲಿ ಮೇಲ್ಛಾವಣಿ ಇಲ್ಲದಿರವ ಹಿನ್ನೆಲೆ ಮಳೆ ನೀರು ಜಮೆಯಾಗಿ ರಸ್ತೆ ಗಬ್ಬೆದ್ದು ನಾರುತ್ತಿದೆ.

ವಾಹನಗಳ ಸುಗಮ ಸಂಚಾರ ಹಾಗೂ ಜನರ ಸುರಕ್ಷತೆ ಹಿನ್ನೆಲೆ ಅಂಡರ್​ ಪಾಸ್​ ನಿರ್ಮಿಸಲಾಗಿದೆ. ಆದರೆ ಈಗ ಜನರ ಸುರಕ್ಷತೆಗಿಂತ ಅಸುರಕ್ಷತೆ ಹೆಚ್ಚಾಗಿ ಕಾಡುತ್ತಿದೆ. ಹೆದ್ದಾರಿ ಗುತ್ತಿಗೆ ವಹಿಸಿಕೊಂಡಿರುವ ಒಎಸ್​ಇ ಸಂಸ್ಥೆ ಅಂಡರ್​ ಪಾಸ್​ನಲ್ಲಿ ಜಮೆಯಾದ ನೀರನ್ನು ತೆರವುಗೊಳಿಸದೆ ಇರುವುದರಿಂದ ಸಂಚಾರಿಗಳು ಪರದಾಡುವಂತಾಗಿದೆ. ಅಲ್ಲದೇ ಕೆಲ ಕಿಡಿಗೇಡಿಗಳು ಇದರಲ್ಲಿ ಮೂತ್ರ, ಕುಡಿದ ಮದ್ಯದ ಬಾಟಲಿಗಳನ್ನು ಒಡೆದು ಹಾಕಿ ವಿಕೃತಿ ಮೆರೆಯುತ್ತಿದ್ದಾರೆ.

ಅಂಡರ್​ ​ಪಾಸ್​​ ಕುರಿತು ವಿವರಿಸಿದ ಸ್ಥಳೀಯ

ಕೂಡಲೇ ಈ ಅವಸ್ಥೆಯನ್ನು ಸರಿಪಡಿಸಬೇಕೆಂದು ಕೃಷ್ಣಗಿರಿ ನಿವಾಸಿಗಳು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details