ಕರ್ನಾಟಕ

karnataka

ತಂದೆ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪನೆ: ನಿತ್ಯ ಪೂಜೆ ಸಲ್ಲಿಸಿ ಅಪ್ಪನ ಸ್ಮರಿಸುತ್ತಿರುವ ಪುತ್ರರು

By

Published : Jun 11, 2022, 2:18 PM IST

Updated : Jun 11, 2022, 3:29 PM IST

ಇತ್ತೀಚಿನ ದಿನಗಳಲ್ಲಿ ತಂದೆ ಮಕ್ಕಳ ಸಂಬಂಧ ಹದಗೆಡುತ್ತಿದೆ. ಅದರಲ್ಲೂ ತಂದೆ ತೀರಿಹೋದ ನಂತರ ಅವರ ನೆನಪು ಮಾಡಿಕೊಳ್ಳುವುದು ವಿರಳ. ಆದರೆ, ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಾಲ್ವರು ಮಕ್ಕಳು ತಮ್ಮ ತಂದೆಯ ನೆನಪಿಗಾಗಿ ತಂದೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.

Children who built their father statue in Koppal
ತಂದೆಯ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜೆ ಸಲ್ಲಿಸಿಸುತ್ತಿರುವ ಪುತ್ರರು

ಕೊಪ್ಪಳ: ಆಧುನಿಕ ಜಗತ್ತಿನ ಶೋಕಿ ಬದುಕಿಗೆ ಮರುಳಾಗಿ ವಯಸ್ಸಾದ ತಂದೆ ತಾಯಿಯನ್ನ ಕೀಳಾಗಿ ಕಾಣುವ, ಮುಪ್ಪಿನ ಕಾಲದಲ್ಲಿ ಸೇವೆ ಮಾಡುವ ಬದಲು, ವೃದ್ಧಾಶ್ರಮಕ್ಕೆ ಕಳುಹಿಸುವ ಪರಿಪಾಠ ಹೆಚ್ಚುತ್ತಿದೆ. ಇಂತಹ ಕಾಲಘಟ್ಟದಲ್ಲಿ ನಾಲ್ವರು ಸಹೋದರರು ತಮ್ಮ ತಂದೆಯನ್ನ ಕೊನೆಯವರೆಗೆ ಪ್ರೀತಿಯಿಂದ ಆರೈಕೆ ಮಾಡಿ, ಅವರು ಕಾಲವಾದ ನಂತರ ಅವರ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪಿಸಿ ಮಾದರಿಯಾಗಿದ್ದಾರೆ.

ತಂದೆಯ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜೆ ಸಲ್ಲಿಸಿಸುತ್ತಿರುವ ಪುತ್ರರು

ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಪೂಜಾರ ಕುಟುಂಬದ ಸಹೋದರರಾದ ಕೃಷ್ಣಪ್ಪ, ಬೆಟ್ಟದಪ್ಪ, ಹನುಮಂತಪ್ಪ ಹಾಗೂ ನಾಗರಾಜ ಸಹೋದರರು ತಮ್ಮ ತಂದೆ ತಿಮ್ಮಣ್ಣ ಪೂಜಾರ ಅವರು ಮೂರ್ತಿ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ಮಾಡುತ್ತಿದ್ದಾರೆ. ಕೂಕನಪಳ್ಳಿ ಗ್ರಾಮದ ದೇವಸ್ಥಾನದ ಪೂಜಾರಿಯಾಗಿದ್ದ ತಿಮ್ಮಣ್ಣ ಪೂಜಾರ ಅವರು, ಬದುಕಿನ ಉದ್ದಕ್ಕೂ ಇತರರಿಗೆ ಒಳಿತನ್ನೇ ಬಯಸುತ್ತಾ ಬದುಕಿದವರು. ಅವರ ಒಳ್ಳೆತನದಿಂದಲೇ ನಮಗೂ ದೇವರು ಒಳ್ಳೆಯದನ್ನೇ ಮಾಡಿದ್ದಾನೆ. ಹಾಗಾಗಿ ನಮ್ಮ ತಂದೆ ನಮಗೆ ಸದಾ ಸ್ಮರಣೀಯ. ಅವರ ನೆನಪು ನಮ್ಮನ್ನು ಬಿಟ್ಟೂ ಬಿಡದೇ ಕಾಡುತ್ತಿದೆ. ಹಾಗಾಗಿ ಅವರ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಿದೆವು ಎನ್ನುತ್ತಿದ್ದಾರೆ ಸಹೋದರರು.

ಕೇವಲ ಮೂರ್ತಿ ಪ್ರತಿಷ್ಠಾಪಿಸಿರುವುದಲ್ಲದೇ ದೇವರ ಕೋಣೆಯಂತೆ ಮೂರ್ತಿಯ ಸುತ್ತಲೂ ಸಿಂಗರಿಸಿ, ನಿತ್ಯ ಈ ಕುಟುಂಬದ ಸದಸ್ಯರು ಪೂಜೆ ಮಾಡುತ್ತಾರೆ. ತಿಮ್ಮಣ್ಣ ಪೂಜಾರ ಅವರು 2005ರಲ್ಲಿ ತೀರಿಕೊಂಡಿದ್ದರು. ಅಂದು ಹಣಕಾಸಿನ ಅಡಚಣೆ ಸೇರಿದಂತೆ ನಾನಾ ಕಾರಣದಿಂದ ಮೂರ್ತಿ ಪ್ರತಿಷ್ಠಾಪನೆ ಸಾಧ್ಯವಾಗಿರಲಿಲ್ಲ. ಆದರೆ, ಅವರ ಜನಮುಖಿ ಕಾರ್ಯಗಳು ನೆನಪಿಗೆ ಬಂದು ಅವರನ್ನು ಜೀವನ ಪರ್ಯಂತ ಸ್ಮರಿಸಿಕೊಳ್ಳುವುದಕ್ಕಾಗಿ ಸಹೋದರರೆಲ್ಲ ಸೇರಿ 12 ವರ್ಷಗಳ ಬಳಿಕ ತಮ್ಮ ತಂದೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಸುಮಾರು 2 ಲಕ್ಷ 50 ಸಾವಿರ ರೂ.ಖರ್ಚು ಮಾಡಿ ತಮ್ಮ ತಂದೆಯ ಕಲ್ಲಿನ ಮೂರ್ತಿಯನ್ನು ಹೊಸಪೇಟೆಯಲ್ಲಿ ತಯಾರಿಸಿಕೊಂಡು ಬಂದು ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಿರುವ ಪೂಜಾರ ಕುಟುಂಬದ ಸಹೋದರರ ಪಿತೃ ಪ್ರೇಮ ಇತರರಿಗೆ ಮಾದರಿ ಆಗಿದೆ.

ಇದನ್ನೂ ಓದಿ:ತಂದೆಯ ಇಚ್ಛೆ - ಮಗಳ ಕೊರಗು ಎರಡನ್ನೂ ಪೂರೈಸಿದ 'ಮೇಣದ ಪ್ರತಿಮೆ'!

Last Updated : Jun 11, 2022, 3:29 PM IST

ABOUT THE AUTHOR

...view details