ಕರ್ನಾಟಕ

karnataka

ETV Bharat / state

ಬಗೆಹರಿಯದ 'ಪ್ರೀತಿ' ಪಂಚಾಯ್ತಿ: ಹಲ್ಲೆಗೊಳಗಾದ ಯುವಕನ ಸಾವು-ಬದುಕಿನ ಹೋರಾಟ

ಯುವತಿ ಜತೆಗಿನ ಪ್ರೀತಿಯ ಕಾರಣಕ್ಕೆ ಯುವಕನ ಮೇಲೆ ಹತ್ಯೆ ಯತ್ನ ನಡೆದಿದೆ. ಈಗ ಆ ಯುವಕ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.

By

Published : Aug 4, 2022, 10:07 PM IST

Trying to kill a young man over love matter at koppal
Trying to kill a young man over love matter at koppal

ಕೊಪ್ಪಳ: ಪ್ರೀತಿಯ ಕಾರಣಕ್ಕೆ ಯುವಕನೋರ್ವನ ಹತ್ಯೆಗೆ ಯತ್ನಿಸಿರುವ ಘಟನೆ ಕೊಪ್ಪಳ ತಾಲೂಕಿನ ಇಂದಿರಾನಗರ ತಾಂಡಾದಲ್ಲಿ ನಡೆದಿದೆ. ಹನುಮೇಶ ಭೋವಿ (25) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಹನುಮೇಶನ ಸಹೋದರ ಶ್ರೀನಿವಾಸ ಎಂಬಾತ ಬಸವರಾಜ ಓಬಳಬಂಡಿ ಎಂಬುವವರ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ.

ಸಾವು ಬದುಕಿನ ನಡುವೆ ಹಲ್ಲೆಗೊಳಗಾದ ಯುವಕ!

ಕಳೆದ ಎಂಟು ತಿಂಗಳ ಹಿಂದೆ ಈ ಬಗ್ಗೆ ಗ್ರಾಮದಲ್ಲಿ ರಾಜಿ ಪಂಚಾಯ್ತಿಯೂ ಆಗಿತ್ತು. ಅದೇ ದ್ವೇಷದ ಹಿನ್ನೆಲೆಯಲ್ಲಿ ಇಂದು ಯುವತಿಯ ಮನೆಯವರು ಹನುಮೇಶನ ಕೊಲೆಗೆ ಯತ್ನಿಸಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.

ಹಲ್ಲೆ ನಡೆದಿದ್ದು ಹೇಗೆ?:ಗುರುವಾರ ಮಧ್ಯಾಹ್ನ ಹನುಮೇಶ ಭೋವಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಇಂದ್ರಗಿ ಗ್ರಾಮದಿಂದ ಬೈಕ್‍ನಲ್ಲಿ ಇಂದಿರಾನಗರಕ್ಕೆ ಬರುತ್ತಿದ್ದಾಗ ದೊಡ್ಲ ಡೈರಿ ಬಳಿ ಬಸವರಾಜ ಓಬಳಬಂಡಿ ಹಾಗೂ ಯಲ್ಲಪ್ಪ ಓಬಳಬಂಡಿ ತಮ್ಮ ಬೈಕ್‍ನಿಂದ ಹನುಮೇಶನ ಬೈಕ್‍ಗೆ ಡಿಕ್ಕಿ ಹೊಡೆಸಿ ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ಹನುಮೇಶ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಡಿವೈಎಸ್ಪಿ ಎಸ್.ಎಚ್.ಸುಬೇದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಕೋಲಾರದಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ

ABOUT THE AUTHOR

...view details