ಕರ್ನಾಟಕ

karnataka

ETV Bharat / state

ಪ್ರತ್ಯಕ್ಷವಾದ ಚಿರತೆ: ಕುರಿ ತಿಂದು ಪರಾರಿ

ಆಕಸ್ಮಿಕವಾಗಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಕುರಿಯೊಂದನ್ನು ತಿಂದು ಪರಾರಿಯಾಗಿದೆ. ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

By

Published : Apr 30, 2019, 7:56 AM IST

ಕುರಿ ತಿಂದು ಪರಾರಿಯಾದ ಚಿರತೆ

ಕೋಲಾರ: ಚಿರತೆಯೊಂದು ಪ್ರತ್ಯಕ್ಷವಾಗಿದ್ದು ತಾಲೂಕಿನ ಕೊಂಡರಾಜೇನಹಳ್ಳಿ ಕುರಿಯೊಂದನ್ನು ತಿಂದು ಪರಾರಿಯಾಗಿರುವ ಘಟನೆ ನಡೆದಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.ಗ್ರಾಮದ ನಂಜುಗೌಡ ಎಂಬುವರಿಗೆ ಸೇರಿದ ಕುರಿ ಇದಾಗಿದೆ.

ತಮ್ಮ ತೋಟದಲ್ಲಿ ಕುರಿ ಸತ್ತುಬಿದ್ದಿದ್ದು ಚಿರತೆ ದಾಳಿ ಮಾಡಿ ಕೊಂದು ಹಾಕಿದೆ ಎಂದು ನಂಜುಗೌಡ ನೋವು ತೋಡಿಕೊಂಡಿದ್ದಾರೆ. ಇನ್ನು ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಚಿರತೆಯನ್ನ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನ ಒತ್ತಾಯಿಸುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details