ಕೋಲಾರ : ರಾಜ್ಯದಲ್ಲಿ ಜಾರಿ ಇರುವ ಕೊರೊನಾ ಜನತಾ ಕರ್ಫ್ಯೂವನ್ನ ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲ ವ್ಯಾಪಾರಿಗಳು ಅಗತ್ಯ ವಸ್ತುಗಳ ಜೊತೆಗೆ ಗುಟ್ಕಾ ಪಾನ್ ಮಸಾಲವನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಕೋಲಾರ: ಕೊರೊನಾ ಕರ್ಫ್ಯೂ ನಡುವೆ ಹೆಚ್ಚು ಬೆಲೆಗೆ ಗುಟ್ಕಾ,ಪಾನ್ ಮಸಾಲ
ಕೊರೊನಾ ಜನತಾ ಕರ್ಫ್ಯೂವನ್ನ ಬಂಡವಾಳ ಮಾಡಿಕೊಂಡ ಕೆಲವರು ಅಗತ್ಯ ವಸ್ತುಗಳ ಜೊತೆಗೆ ಗುಟ್ಕಾ ಪಾನ್ ಮಸಾಲವನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪ ಕೋಲಾರದಲ್ಲಿ ಕೇಳಿ ಬಂದಿದೆ.
ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಪಟ್ಟಣ ಪ್ರದೇಶದಲ್ಲಿ ಗುಟ್ಕಾ, ಬೀಡಿ, ಸಿಗರೇಟ್ನಂತಹ ಪದಾರ್ಥಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ವ್ಯಾಪಾರಿಗಳು ಎಂಆರ್ಪಿ ಬೆಲೆಗಿಂತ ಹತ್ತು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ವಸ್ತುಗಳನ್ನು ಬ್ಲಾಕ್ ಮಾರ್ಕೇಟ್ನಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ
ಇನ್ನೂ ಈ ವಿಚಾರವನ್ನ ಸಾಕಷ್ಟು ಜನ ಗ್ರಾಹಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ವ್ಯಾಪಾರಿಗಳಿಗೆ ಕಡಿವಾಣ ಹಾಕಬೇಕು, ಜನತಾ ಕರ್ಫ್ಯೂನಲ್ಲಿ ನಡೆಯುತ್ತಿರುವ ಸುಲಿಗೆಗೆ ಬ್ರೇಕ್ ಹಾಕುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.