ಕೊಡಗು: ಸೀಲ್ ಡೌನ್ ಮಾಡಲಾದ ಪ್ರದೇಶದಿಂದ ಬಂದು ವ್ಯಾಪಾರ ಮಾಡುತ್ತಿದ್ದ ವರ್ತರನ್ನು ಮರಳಿ ಕ್ವಾರಂಟೈನ್ಗೆ ಕಳಿಸಲಾಯಿತು.
ಪಟ್ಟಣದ ಮೀನು ಪೇಟೆಯಲ್ಲಿ ಕೊರೊನಾ ಪಾಸಿಟಿವ್ ಬಂದ ಕಾರಣ ಸೋಂಕಿತ ವ್ಯಕ್ತಿ ಇರುವ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೆ ಇಂದು ಹಲವಾರು ವರ್ತಕರು ಅದೇ ಏರಿಯಾದಿಂದ ಪಟ್ಟಣಕ್ಕೆ ಬಂದು ವ್ಯಾಪಾರ ಮಾಡುತ್ತಿದ್ದರು. ಇದನ್ನು ಕಂಡ ಕೊಡಗು ಖಾಸಗಿ ಬಸ್ ಕಾರ್ಮಿಕ ಸಂಘದ ಅಧ್ಯಕ್ಷ ದಿನೇಶ ನಾಯರ್ ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಸೀಲ್ ಡೌನ್ ಏರಿಯಾದಿಂದ ಬಂದು ವ್ಯಾಪಾರ ಆರಂಭಿಸಿದ ವರ್ತಕರು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ನಂದೀಶ್, ಮುಖ್ಯಾಧಿಕಾರಿ ಶ್ರೀಧರ್ ಮತ್ತು ಸಿಬ್ಬಂದಿ ವರ್ತಕರಿಗೆ ಎಚ್ಚರಿಕೆ ಕೊಟ್ಟು ಅಂಗಡಿಗಳನ್ನು ಮುಚ್ಚಿಸಿ ಕ್ವಾರಂಟೈನ್ಗೆ ಕಳುಹಿಸಿದರು.
ಕೆಲವು ವರ್ತಕರು ಸೀಲ್ ಡೌನ್ ಮಾಡಿದ ಪ್ರದೇಶದಿಂದ ಬಂದು ವ್ಯಾಪಾರ ಮಾಡುತ್ತಿದ್ದರು. ಅವರಿಗೆ ಎಚ್ಚರಿಕೆ ಕೊಟ್ಟು ಅಂಗಡಿಗಳನ್ನು ಮುಚ್ಚಿಸಲಾಗಿದೆ. ಮುಂದೆ ಇಂತಹ ಪ್ರಕರಣಗಳು ಕಂಡು ಬಂದರೆ ಅಂತಹ ಅಂಗಡಿಗಳ ಪರವಾನಗಿ ರದ್ದು ಮಾಡುತ್ತೇವೆ ಎಂದು ಎಚ್ಚರಿಸಿದರು.