ಕರ್ನಾಟಕ

karnataka

By

Published : Apr 4, 2019, 7:56 PM IST

ETV Bharat / state

ಇಲ್ಲಿ ಮಲ್ಲಕಂಬ ಅಲ್ಲಾಡಿದ್ರೆ ಇಷ್ಟಾರ್ಥ ಸಿದ್ಧಿಸುತ್ತದಂತೆ!

ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಕಲಬುರಗಿಯ ಗಾಜಿ ಪೂರ ಬಡಾವಣೆಯಲ್ಲಿರುವ ಚಂದನಗೇರಿ ಶ್ರೀ ಆಂಜನೇಯನ ಸನ್ನಿಧಿಗೆ ಬರ್ತಾರೆ. ಆದ್ರೆ ಭಕ್ತಾದಿಗಳ ಇಷ್ಟಾರ್ಥ ಈಡೇರುತ್ತಾ, ಇಲ್ವಾ ಅನ್ನೋದು ಕ್ಷಣಾರ್ಧದಲ್ಲೇ ತಿಳಿಯುತ್ತೆ.

ಇಲ್ಲಿ ಮಲ್ಲಕಂಬ ಅಲ್ಲಾಡಿದ್ರೆ ಇಷ್ಟಾರ್ಥ ಸಿದ್ಧಿಸುತ್ತದಂತೆ

ಕಲಬುರಗಿ: ದೇಗುಲಕ್ಕೆ ಬರುವ ಭಕ್ತಾದಿಗಳೆಲ್ಲ ಮೊದಲಿಗೆ ಆಂಜನೇಯನಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆ ಮಲ್ಲಕಂಬವನ್ನು ಅಲುಗಾಡಿಸುತ್ತಾರೆ. ಒಂದು ವೇಳೆ ಆ ಮಲ್ಲಕಂಬ ಅಲುಗಾಡದಿದ್ರೆ, ಯಾವುದೇ ಕಾರಣಕ್ಕೂ ಅವರು ಅಂದುಕೊಂಡ ಕೆಲಸ ಆಗಲ್ಲ ಅನ್ನೋದು ಅಲ್ಲಿನ ಜನರ ನಂಬಿಕೆ..

ಇಲ್ಲಿ ಮಲ್ಲಕಂಬ ಅಲ್ಲಾಡಿದ್ರೆ ಇಷ್ಟಾರ್ಥ ಸಿದ್ಧಿಸುತ್ತದಂತೆ

ಇನ್ನು ನಮ್ಮ ಕಷ್ಟಗಳನ್ನೆಲ್ಲ ಈ ದೇವರು ಬಗೆಹರಿಸುತ್ತಿದ್ದು, ನಮ್ಮ ಇಂದಿನ ಸಂತೋಷಕ್ಕೆ ಈ ಆಂಜನೇಯನೇ ಕಾರಣ ಅಂತಾರೆ ಭಕ್ತರೊಬ್ಬರು

ಹೈದರಾಬಾದ್ ನಿಜಾಮರು ಕರ್ನಾಟಕವನ್ನು ಆಳುತ್ತಿದ್ದ ಸಂದರ್ಭದಲ್ಲಿ ಈ ದೇಗುಲವನ್ನು ನಿರ್ಮಿಸಿದ್ದನಂತೆ. ನಿಜಾಮ ಸರ್ಕಾರ ಜನರನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದಾಗ ಈ ಆಂಜನೇಯ ರಕ್ಷಿಸುತ್ತಿದ್ದನಂತೆ. ಉದ್ಯೋಗ, ಕೌಟುಂಬಿಕ ಕಲಹ, ಆರೋಗ್ಯ ಏನೇ ಸಮಸ್ಯೆ ಇದ್ರೂ ಇಲ್ಲಿಗೆ ಬಂದರೆ ಸಂಕಷ್ಟ ನಿವಾರಣೆಯಾಗುತ್ತದಂತೆ.

ಕೇವಲ ಹೈದರಾಬಾದ್ ಕರ್ನಾಟಕದವರು ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರಂತೆ.. ಇಂದಿನ ಆಧುನಿಕತೆಯ ಮಧ್ಯೆಯೂ ಈ ಮಲ್ಲಕಂಬದ ಪವಾಡ ಜನರಲ್ಲಿ ಅಚ್ಚರಿ ಮೂಡಿಸಿದೆ.

ABOUT THE AUTHOR

...view details