ಕರ್ನಾಟಕ

karnataka

ETV Bharat / state

3 ದಿನಗಳ ಕಾಲ ನೆಲ ಸಮಾಧಿಯಾಗಿ ಸ್ವಾಮೀಜಿ ಅನುಷ್ಠಾನ

ವಿಷ್ಣು ಲಿಂಗಂ ಆಶ್ರಮದ ಸ್ವಾಮೀಜಿಯಾದ ಶ್ರೀಮಂತ ತಾತನವರ ಶಿಷ್ಯ ಲೋಕೇಶ ಸ್ವಾಮೀಜಿ ನೆಲ ಸಮಾಧಿ ಅನುಷ್ಠಾನ ಆರಂಭಿಸಿದ್ದು, ಸೋಮವಾರ ಸಂಜೆ ನೆಲಸಮಾಧಿಯಾಗಿದ್ದು, ಮೂರು ದಿನಗಳ ಕಾಲ ಅನುಷ್ಠಾನ ನಡೆಸಲಿದ್ದಾರೆ. ಭಕ್ತ ಸಮೂಹ ಸ್ವಾಮೀಜಿಗೆ ಜೈ ಕಾರವನ್ನು ಹಾಕಿ ಶ್ರೀಗಳ ಅನುಷ್ಠಾನಕ್ಕೆ ಸಾಕ್ಷಿಯಾದರು.

By

Published : Feb 13, 2019, 6:06 PM IST

ಲೋಕೇಶ ಸ್ವಾಮೀಜಿ

ಕಲಬುರಗಿ:ಲೋಕ ಕಲ್ಯಾಣಕ್ಕಾಗಿ ಸೇಡಂ ಹೊರವಲಯದ ವಿಷ್ಣು ಲಿಂಗಂ ಆಶ್ರಮದ ಲೋಕೇಶ ಸ್ವಾಮೀಜಿಯವರು ಮೂರು ದಿನಗಳ ಕಾಲ ನೆಲ ಸಮಾಧಿ ಸ್ಥಿತಿಯಲ್ಲಿ ಅನುಷ್ಠಾನಗೊಂಡಿದ್ದಾರೆ.

ವಿಷ್ಣು ಲಿಂಗಂ ಆಶ್ರಮ

ವಿಷ್ಣು ಲಿಂಗಂ ಆಶ್ರಮದ ಸ್ವಾಮೀಜಿಯಾದ ಶ್ರೀಮಂತ ತಾತನವರ ಶಿಷ್ಯ ಲೋಕೇಶ ಸ್ವಾಮೀಜಿ ನೆಲ ಸಮಾಧಿ ಅನುಷ್ಠಾನ ಆರಂಭಿಸಿದ್ದು, ಸೋಮವಾರ ಸಂಜೆ ನೆಲಸಮಾಧಿಯಾಗಿದ್ದು, ಮೂರು ದಿನಗಳ ಕಾಲ ಅನುಷ್ಠಾನ ನಡೆಸಲಿದ್ದಾರೆ. ಭಕ್ತ ಸಮೂಹ ಸ್ವಾಮೀಜಿಗೆ ಜೈ ಕಾರವನ್ನು ಹಾಕಿ ಶ್ರೀಗಳ ಅನುಷ್ಠಾನಕ್ಕೆ ಸಾಕ್ಷಿಯಾದರು. ಮೂರು ದಿನಗಳ ಕಾಲ ಅನುಷ್ಠಾನಗೊಳ್ಳಲಿದ್ದು, ಗುರುವಾರ ಸಂಜೆ ಸ್ವಾಮೀಜಿ ಅನುಷ್ಠಾನ ಸಮಾಪ್ತಿಗೊಳಿಸಿ ಹೊರಬರಲಿದ್ದಾರೆ ಎಂದು ಭಕ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಲೋಕೇಶ ಸ್ವಾಮೀಜಿ ಗುರುಗಳಾದ ಶ್ರೀಮಂತ ತಾತನವರು ಮೂರು ದಿನಗಳ ಕಾಲ ಅನುಷ್ಠಾನ ಮುಗಿಸಿ ನೆಲ ಸಮಾಧಿಯಿಂದ ಹೊರಬಂದು ಭಕ್ತರನ್ನು ಚಕಿತಗೊಳಿಸಿದ್ದರು. ಇದೀಗ ಒಂದು ತಿಂಗಳ ಅಂತರದಲ್ಲಿಯೇ ಅವರ ಶಿಷ್ಯ ಲೋಕೇಶ ಸ್ವಾಮೀಜಿ ಅನುಷ್ಠಾನ ಆರಂಭಿಸಿದ್ದಾರೆ.

ABOUT THE AUTHOR

...view details