ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಮಧ್ಯರಾತ್ರಿ ಎರಡು ಮನೆ ದೋಚಿ ಪರಾರಿಯಾದ ಕಳ್ಳರು

ಕುಟುಂಬದವರೆಲ್ಲಾ ಗಾಢ ನಿದ್ದೆಗೆ ಜಾರಿದಾಗ ಸರಣಿ ಮನೆಗಳ್ಳತನ ನಡೆದಿರುವ ಘಟನೆ ನಗರದ ಕೊಠಾರಿ ಭವನ ಹಿಂಭಾಗದ ಶಾಸ್ತ್ರಿ ನಗರದಲ್ಲಿ ನಡೆದಿದೆ. ವಿಜಯಕುಮಾರ್ ಮತ್ತು ಶರಣಪ್ಪ ಎಂಬುವರಿಗೆ ಸೇರಿದ ಮನೆಗಳಲ್ಲಿ ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

By

Published : Jun 28, 2019, 5:04 PM IST

ಮನೆಯಲ್ಲಿ 4 ಲಕ್ಷ ನಗದು, 30 ಗ್ರಾಂ ಚಿನ್ನಾಭರಣ ಕಳುವು

ಕಲಬುರಗಿ: ಕುಟುಂಬದವರೆಲ್ಲಾ ಗಾಢ ನಿದ್ರೆಗೆ ಜಾರಿದಾಗ ಸರಣಿ ಮನೆಗಳ್ಳತನ ನಡೆದಿರುವ ಘಟನೆ ನಗರದ ಕೊಠಾರಿ ಭವನ ಹಿಂಭಾಗದ ಶಾಸ್ತ್ರಿ ನಗರದಲ್ಲಿ ನಡೆದಿದೆ. ವಿಜಯಕುಮಾರ್ ಮತ್ತು ಶರಣಪ್ಪ ಎಂಬುವರಿಗೆ ಸೇರಿದ ಮನೆಗಳಲ್ಲಿ ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ವಿಜಯಕುಮಾರ್ ಮನೆಯಲ್ಲಿ 4 ಲಕ್ಷ ನಗದು, 30 ಗ್ರಾಂ ಚಿನ್ನಾಭರಣ ಕಳುವಾಗಿದೆ. ಅದೇ ನಗರದಲ್ಲಿರುವ ಶರಣಪ್ಪ ಎಂಬುವರ ಮನೆಯಲ್ಲಿ 25 ಸಾವಿರ ನಗದು ಕಳ್ಳತನವಾಗಿದೆ. ನಸುಕಿನ ಜಾವ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

ಮಧ್ಯರಾತ್ರಿ ಎರಡು ಮನೆ ದೋಚಿ ಪರಾರಿಯಾದ ಕಳ್ಳರು

ಎರಡು ಕುಟುಂಬದಲ್ಲೂ ಒಂದೇ ತರಹದ ಘಟನೆ ನಡೆದಿದ್ದು, ಮನೆಯವರೆಲ್ಲಾ ಮಲಗಿರುವಾಗ ಒಳಹೊಕ್ಕಿರುವ ಖದೀಮರು ಟ್ರಸರಿ ಕೀಲಿ ಮುರಿದು ಚಿನ್ನ-ಬೆಳ್ಳಿ ಹಾಗೂ ನಗದು ಹಣ ಕದ್ದಿದ್ದಾರೆ. ಆದ್ರೆ, ಚಾಲಾಕಿ ಕಳ್ಳರು ಬೆಳ್ಳಿ ಆಭರಣಗಳನ್ನು ಮಾತ್ರ ಮನೆಯ ಪಕ್ಕದಲ್ಲಿ ಬಿಸಾಡಿ ಹೋಗಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details