ಕರ್ನಾಟಕ

karnataka

ETV Bharat / state

ಬಿರುಸಾದ ಮಳೆ: ಕಲಬುರಗಿಯಲ್ಲಿ ಸಿಡಿಲಿಗೆ 2 ಎತ್ತುಗಳು ಬಲಿ

ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಬಿರುಸಾಗಿ ಮಳೆ ಸುರಿಯಿತು. ಭಾರಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.

By

Published : Apr 30, 2019, 8:59 AM IST

ಭಾರಿ ಸಿಡಿಲಿಗೆ ಎರಡು ಎತ್ತುಗಳು ಬಲಿ

ಕಲಬುರಗಿ: ಜಿಲ್ಲೆಯಲ್ಲಿ ಸೋಮವಾರ ಹಲವೆಡೆ ಗುಡುಗು ಸಿಡಿಲು ಸಮೇತ ಉತ್ತಮ ಮಳೆ ಸುರಿದಿದೆ. ಸೇಡಂ ತಾಲೂಕಿನ ಗಂಗಾರಾವಲಪಲ್ಲಿಯಲ್ಲಿ ಭಾರಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.

ಖಾಸೀಂ ಅಲಿ ಪಿಂಜಾರ್​ ಎಂಬುವರಿಗೆ ಸೇರಿದ ಎತ್ತುಗಳು ಇವಾಗಿವೆ. ಅಂದಾಜು ಒಂದೂವರೆ ಲಕ್ಷ ರೂ. ಮೌಲ್ಯದ ಎತ್ತುಗಳು ಸಿಡಿಲಿಗೆ ಬಲಿಯಾಗಿದ್ದರಿಂದ ಖಾಸೀಂ ಅಲಿ ಪಿಂಜಾರ್ ಕಂಗಾಲಾಗಿದ್ದಾರೆ. ಎತ್ತುಗಳನ್ನು ಮರದ ಕೆಳಗೆ ಕಟ್ಟಿದ್ದಾಗ ಈ ದುರ್ಘಟನೆ ನಡೆದಿದೆ.

ABOUT THE AUTHOR

...view details