ಕರ್ನಾಟಕ

karnataka

ಎಸ್ಟಿ ಹೋರಾಟಕ್ಕೆ ವಿರೋಧವಿಲ್ಲ ಅನ್ನೋರು, ಇದೆಲ್ಲ ಯಾಕೆ ಮಾತಾಡಬೇಕು: ಎಚ್.ವಿಶ್ವನಾಥ್

By

Published : Jan 15, 2021, 5:43 PM IST

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್​. ವಿಶ್ವನಾಥ್​, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಶ್ನೆ ಅಲ್ಲ. ನಮ್ಮ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಅನ್ನೋದು ಪ್ರಶ್ನೆಯಷ್ಟೇ ಎಂದು ಹೇಳುವ ಮೂಲಕ ಬಿಜೆಪಿಯವರು ಬರೀ ಬ್ಲಾಕ್​ಮೇಲ್​ ಗಿರಾಕಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

Vishwanath
ಎಚ್. ವಿಶ್ವನಾಥ್

ಹಾವೇರಿ: ಬಿಜೆಪಿಯವರು ಬರೀ ಬ್ಲಾಕ್​ಮೇಲ್​ ಗಿರಾಕಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಚ್​. ವಿಶ್ವನಾಥ್​, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಶ್ನೆ ಅಲ್ಲ. ನಮ್ಮ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಅನ್ನೋದಷ್ಟೇ ಇಲ್ಲಿರುವ ಪ್ರಶ್ನೆ ಎಂದರು.

ಮಾಜಿ ಸಚಿವ ಎಚ್​. ವಿಶ್ವನಾಥ್

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ‌ ಸೀನಿಯರ್‌ ಲೀಡರ್ ಇದ್ದಾರೆ. ನಮ್ಮ ನಾಯಕರು, ಸಮಾಜದ ಮುಖಂಡರಲ್ಲಿ ಅವರೂ ಒಬ್ಬರಿದ್ದಾರೆ. ಎಸ್ಟಿ ಹೋರಾಟಕ್ಕೆ ವಿರೋಧವಿಲ್ಲ ಅನ್ನೋರು, ಇದೆಲ್ಲ ಯಾಕೆ ಮಾತಾಡಬೇಕು. ವಿರೋಧವಿಲ್ಲ, ಏನ್ ಬೇಕು ಮಾಡ್ರಪ್ಪ ಅನ್ನಬೇಕು ಎಂದರು.

ಇದನ್ನೂ ಓದಿ:ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿಗೆ ಆಗ್ರಹಿಸಿ ಇಂದಿನಿಂದ ಪಾದಯಾತ್ರೆ

ABOUT THE AUTHOR

...view details